19
July, 2026

A News 365Times Venture

19
Sunday
July, 2026

A News 365Times Venture

ಆಂಧ್ರದಲ್ಲಿ ಕೋವಿಡ್:  ಹೈ ಅಲರ್ಟ್ ಘೋಷಣೆ.

Date:

ಆಂಧ್ರಪ್ರದೇಶ,ಜುಲೈ,18,2026 (www.justkannada.in): ಕೊನೆಯ ಕೋವಿಡ್ ಅಲೆಯ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್-19 ಪ್ರಕರಣಗಳು ಹಾಗೂ ನಾಲ್ಕು ಸಾವುಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

ಜೂನ್ 26ರಿಂದ ಜುಲೈ 16ರವರೆಗೆ ರಾಜ್ಯದಲ್ಲಿ 12 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕಡಪದಲ್ಲಿ ಮೂವರು ಹಾಗೂ ಕಾಕಿನಾಡದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ಎಲ್ಲರೂ ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಸೇರಿದಂತೆ ಮೊದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೋಗಿಗಳ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV)ಗೆ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ. ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ಇಲ್ಲ, ಕೋವಿಡ್ ಪ್ರಕರಣಗಳು ವಿವಿಧ ಪ್ರದೇಶಗಳಲ್ಲಿ ಚದುರಿದಂತೆ ಕಂಡುಬಂದಿದ್ದು, ಯಾವುದೇ ಕ್ಲಸ್ಟರ್ ಸೋಂಕು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಕೆಲವರು ಮನೆ ಪ್ರತ್ಯೇಕ ವಾಸದಲ್ಲಿದ್ದು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಅನಗತ್ಯ ಆತಂಕ ಪಡದೆ, ಮಾಸ್ಕ್ ಧರಿಸುವುದು ಹಾಗೂ ಜನಸಂದಣಿ ಇರುವ ಸ್ಥಳಗಳನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜುಲೈ 1ರಿಂದ ದೇಶದಲ್ಲಿ 339 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಕೇರಳ (115) ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ನಂತರ ಕರ್ನಾಟಕ (64), ಮಹಾರಾಷ್ಟ್ರ (43), ತಮಿಳುನಾಡು (39), ದೆಹಲಿ (18), ಅಂಡಮಾನ್-ನಿಕೋಬಾರ್ (18), ರಾಜಸ್ಥಾನ (12) ಹಾಗೂ ಆಂಧ್ರಪ್ರದೇಶ (12) ಸ್ಥಾನ ಪಡೆದಿವೆ.

Key words: Covid-19, Andhra, High alert, declared.

The post ಆಂಧ್ರದಲ್ಲಿ ಕೋವಿಡ್:  ಹೈ ಅಲರ್ಟ್ ಘೋಷಣೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ധര്‍മേന്ദ്ര പ്രധാന്‍ രാജിവയ്ക്കാത്തത് നിര്‍ഭാഗ്യകരം; പാര്‍ലമെന്റ് സമ്മേളനത്തില്‍ ഉന്നയിക്കുമെന്ന് കൊടിക്കുന്നില്‍ സുരേഷ്

ന്യൂദല്‍ഹി: നീറ്റ് ചോദ്യപ്പേപ്പര്‍ ചോര്‍ച്ച അടക്കമുള്ള പ്രശ്‌നങ്ങളില്‍ ഉത്തരവാദിയായ കേന്ദ്ര വിദ്യാഭ്യാസ...

டெல்லியில் இன்று அனைத்துக் கட்சி கூட்டம்; கோபத்தில் வெளியேறிய எதிர்க்கட்சிகள் – காரணம் 'திரிணாமுல்'

நாளை (ஜூலை 20, 2026) முதல் நாடாளுமன்றத்தில் மழைக்கால கூட்டத்தொடர் தொடங்க...

ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ

ಬೆಂಗಳೂರು,ಜುಲೈ,18,2026 (www.justkannada.in): ಬಿಡದಿ ಟೌನ್‌ ಶಿಪ್‌  ಯೋಜನೆ ವಿರೋಧಿಸಿ  ಬಿಜೆಪಿ-ಜೆಡಿಎಸ್...