22
July, 2026

A News 365Times Venture

22
Wednesday
July, 2026

A News 365Times Venture

ಮಣ್ಣಲ್ಲಿ ಮಣ್ಣಾದ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಕೆ

Date:

ಹಾಸನ,ಜುಲೈ,20,2026 (www.justkannada.in):  ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ನಿಧನರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ನೆರವೇರಿತು.

ಹಾಸನ ಜಿಲ್ಲೆ ಹೊಳೇನರಸಿಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ  ಚೆನ್ನಮ್ಮರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು.  ಬಳಿಕ ಚೆನ್ನಮ್ಮ ಕುಟುಂಬದ ಸದಸ್ಯರಿಗೆ ಸಿಎಂ ಡಿಕೆ ಶಿವಕುಮಾರ್ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪತ್ನಿಯ ಪಾರ್ಥಿವ ಶರೀರಕ್ಕೆ ಹೂ ಗುಚ್ಛ ಇರಿಸಿ ಭಾವುಕರಾದರು.

ಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶಿವರಾಜ್ ಸಿಂಗ್ ಚೌಹಾಣ್, ವಿ.ಸೋಮಣ್ಣ  ಬಿವೈ ವಿಜಯೇಂದ್ರ, ಸಚಿವರಾದ ಕೃಷ್ಣಭೈರೇಗೌಡ, ಕೆಜೆ ಜಾರ್ಜ್, ಕೆಎಚ್ ಮುನಿಯಪ್ಪ  ಸೇರಿ ಶಾಸಕರು ರಾಜಕೀಯ ಗಣ್ಯರು, ಮಠಾಧೀಶರು ಚೆನ್ನಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಇದಾದ ಬಳಿಕ  ಕಿರಿಯ ಪುತ್ರ ಹೆಚ್ ಡಿ ರಮೇಶ್ ಅವರು ಅಂತಿಮ ವಿಧಾನ ಪೂರೈಸಿದ್ದು ಅಂತ್ಯಕ್ರಿಯೆ ನೆರವೇರಿತು.

Key words: ‍Former PM, H.D. Deve Gowda’s,  wife,  Chennamma, Funeral

The post ಮಣ್ಣಲ್ಲಿ ಮಣ್ಣಾದ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കറുത്ത വസ്ത്രം ധരിച്ച് പ്രതിപക്ഷ പ്രതിഷേധം; പാര്‍മെന്റ് ഇന്നും പ്രക്ഷുബ്ധം: സഭ നിര്‍ത്തിവെച്ചു

ന്യൂദല്‍ഹി: പാര്‍ലമെന്റിലെ വര്‍ഷകാല സമ്മേളനത്തിന്റെ രണ്ടാം ദിവസവും പ്രതിപക്ഷ പ്രതിഷേധം. സി.ജെ.പി...

அடிப்படை வசதிகளற்ற குன்னவயல் ஊராட்சி ஒன்றிய தொடக்கப்பள்ளி; 15 ஆண்டுகளாகத் தொடரும் அவலம்!

புதுக்கோட்டை மாவட்டம், 9-ஏ நத்தம்பண்ணை ஊராட்சிக்கு உட்பட்ட குன்னவயல் கிராமத்தில் 15...

Crude Oil Prices: మరో షాక్.. హార్మూజ్‌ తర్వాత కొత్త సంక్షోభం.. ముడి చమురు ధరలు భారీగా పెరుగుతాయా..?

Crude Oil Prices: పశ్చిమ ఆసియాలో కొనసాగుతున్న అమెరికా-ఇరాన్ ఉద్రిక్తతల ప్రభావం...

ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ಯಾರನ್ನೂ ಸಹ ಬಿಡುವುದಿಲ್ಲ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜುಲೈ,21,2026 (www.justkannada.in): ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ...