ಬೆಂಗಳೂರು,ಜೂನ್,16,2026 (www.justkannada.in): ಸಿಎಂ ಮತ್ತು 13 ಸಚಿವರ ಪದಗ್ರಹಣ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದ ಹೈಕೋರ್ಟ್ ಅರ್ಜಿದಾರ ವ್ಯಕ್ತಿಗೆ 50 ಸಾವಿರ ರೂ ದಂಡ ವಿಧಿಸಿದೆ.
ಧಾರವಾಡದ ಮಂಗಳಪ್ಪ ಎಂಬುವವರು ಸಿಎಂ ಹಾಗೂ 13 ಸಚಿವರ ಪದಗ್ರಹಣ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.. ಸಂವಿಧಾನದ 164(1ಎ) ತಪ್ಪಾಗಿ ಅರ್ಥೈಸಿ ಅರ್ಜಿದಾರ ಪಿಐಎಲ್ ಸಲ್ಲಿಸಿದ್ದರು.
ಸಚಿವರ ಸಂಖ್ಯೆ ಗರಿಷ್ಠ ಸಂಖ್ಯೆ ಸದನ ಬಲದ ಶೇ 15ರಷ್ಟು ಮೀರಬಾರದು. ಸಚಿವರ ಕನಿಷ್ಠ ಸಂಖ್ಯೆ 12 ಮೀರಬಾರದೆಂದು ಸಂವಿಧಾನದ ನಿಯಮವಿದೆ. ಹೀಗಾಗಿ ಶೇ 12 ರಷ್ಟು ಸಚಿವರ ನೇಮಕವಾಗಿಲ್ಲದಿರುವುದರಿಂದ ಪದಗ್ರಹಣ ಕಾನೂನು ಬಾಹಿರ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಆದರೆ ನಿಯಮ ತಪ್ಪಾಗಿ ವ್ಯಾಖ್ಯಾನಿಸಿ ಪಬ್ಲಿಸಿಟಿಗಾಗಿ ಪಿಐಎಲ್ ಸಲ್ಲಿಸಿದ್ದಾರೆಂದು ಪರಿಗಣಿಸಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.
Key words: High Court, PIL, challenging, CM, minister, swearing, fine
The post ಸಿಎಂ, ಸಚಿವರ ಪದಗ್ರಹಣ ಪ್ರಶ್ನಿಸಿದ್ದ PIL ವಜಾಗೊಳಿಸಿ ದಂಡ ವಿಧಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





