22
April, 2026

A News 365Times Venture

22
Wednesday
April, 2026

A News 365Times Venture

ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ

Date:

ಮೈಸೂರು,ಏಪ್ರಿಲ್,30,2025 (www.justkannada.in):  ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ 250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಧರೆಗೆ ಉರುಳಿದ್ದು, ಪರಿಣಾಮ ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೀರೇಗೌಡ ಎಂಬುವರಿಗೆ ಸೇರಿದ ಆಲದ ಮರ ಭಾರಿ ಮಳೆ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿದ್ದು ಇದರಿಂದಾಗಿ ಆರು ತೆಂಗಿನ ಮರ, ನಾಲ್ಕು ಮಾವಿನ ಮರಗಳು ಸಂಪೂರ್ಣ ನಾಶವಾಗಿದೆ.

250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಇದಾಗಿದ್ದು, ಇದರಿಂದಾಗಿ ಮಾವಿನ ಫಸಲು ಸಂಪೂರ್ಣ ನೆಲಕಚ್ಚಿದೆ. ಬಾದಾಮಿ ಮಾವಿನ ಕಾಯಿಗಳು ಸಂಪೂರ್ಣ ನೆಲಕ್ಕುದುರಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿದ್ದು, ನಾಲ್ಕು ಮಾವಿನ ಮರದಿಂದ ಸುಮಾರು ನಾಲ್ಕು ಟನ್ ಮಾವು ಕಟಾವಿಗೆ ಬಂದಿತ್ತು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ.

Key words: Rain, banyan tree, Destroy , mango, crop

The post ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

மேற்கு வங்கம் : பிரசார களத்துக்கு வந்த 'மீன்கள்' ; மேற்கு வங்கத்தை அசைக்கும் உணவு யுத்தம்!

கொல்கத்தாவின் பாரக்பூர் தொகுதியின் பா.ஜ.க வேட்பாளரான கௌஸ்தவ் பக்சி, பாரம்பரிய உடை...

TGSRTC: ఆర్టీసీ కార్మికుల ప్రధాన డిమాండ్స్ ఇవే.. తప్పక తెలుసుకోండి..

TGSRTC: తెలంగాణలో ఆర్టీసీ కార్మికులు రోడ్డెక్కారు. ఆర్టీసీ సమ్మెతో బస్సులు డిపోలకే...

ದಿ ಆಕ್ಮಿ ಸ್ಕೂಲ್ ವೆಬ್‌ ಸೈಟ್ ಬಿಡುಗಡೆ

ಮೈಸೂರು, ಏಪ್ರಿಲ್, 21, 2026 (www.justkannada.in): ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ...