17
April, 2026

A News 365Times Venture

17
Friday
April, 2026

A News 365Times Venture

ಮೈಸೂರು: ಸಿಸಿಬಿಯ 8 ಪೊಲೀಸರು ಎತ್ತಂಗಡಿ

Date:

ಮೈಸೂರು,ಫೆಬ್ರವರಿ,6,2026 (www.justkannada.in):  ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾದ ಆರೋಪದ ನಡುವೆ ಮೈಸೂರಿನ ಸಿಟಿ ಕ್ರೈಂ ಬ್ರಾಂಚ್‌ (CCB)ನಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆದಿದೆ.

ಕರ್ತವ್ಯ ಲೋಪ, ಅಪರಾಧ ಕೃತ್ಯಗಳ ಪತ್ತೆಯಲ್ಲಿ ನಿರ್ಲಕ್ಷ್ಯ ಹಾಗೂ ಡ್ರಗ್ ಪೆಡ್ಲರ್‌ ಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವ ಆರೋಪಗಳ ಹಿನ್ನೆಲೆ ಎಂಟು ಮಂದಿ ಪೊಲೀಸರನ್ನು ತಕ್ಷಣದಿಂದಲೇ ಎತ್ತಂಗಡಿ ಮಾಡಲಾಗಿದೆ ಎಂದು ಮೂಲಗಳು ಜಸ್ಟ್ ಕನ್ನಡಗೆ ತಿಳಿಸಿವೆ.

ಇದಕ್ಕೆ ಜೊತೆಯಾಗಿ ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿಗೂ ವರ್ಗಾವಣೆ ಶಿಕ್ಷೆ ವಿಧಿಸಲಾಗಿದ್ದು, ನಗರದ ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ ನಿಯಂತ್ರಣದ ಮೇಲಿನ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲಾಖೆ ಕಠಿಣ ಸಂದೇಶ ನೀಡಿದಂತಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಡ್ರಗ್ ಜಾಲ, ಪೆಡ್ಲರ್‌ ಗಳ ಚಟುವಟಿಕೆ ಹಾಗೂ ಯುವಕರ ಸೆಳೆತ ಹೆಚ್ಚುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆ ಮೇಲಾಧಿಕಾರಿಗಳ ಗಮನಕ್ಕೆ ಹಲವು ಅಂಶಗಳು ಬಂದಿದ್ದು, ಕಾರ್ಯಕ್ಷಮತೆ ಪರಿಶೀಲನೆಯ ಬಳಿಕ ಈ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಿಭಾಗದೊಳಗೆ ಕಾರ್ಯಕ್ಷಮತೆ ಹೆಚ್ಚಿಸುವುದು, ಡ್ರಗ್ ವಿರುದ್ಧ ವಿಶೇಷ ದಾಳಿ ಬಲಪಡಿಸುವುದು ಮತ್ತು ಅಪರಾಧ ನಿಯಂತ್ರಣಕ್ಕೆ ಹೊಸ ತಂಡಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ವರ್ಗಾವಣೆಯಾದವರು: ಶಿವಣ್ಣ, ದೊಡ್ಡೇಗೌಡ, ಅನಿಲ್, ರಾಜು, ಉಮಾ ಮಹೇಶ್ವರ್, ರಾಮಸ್ವಾಮಿ, ಪ್ರಕಾಶ್ ಹಾಗೂ ಗೋವಿಂದ

Key words: Mysore, 8 CCB police, Transfer

The post ಮೈಸೂರು: ಸಿಸಿಬಿಯ 8 ಪೊಲೀಸರು ಎತ್ತಂಗಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മന്തിക്കടയുടെ വിഷുപരസ്യത്തിൽ ശ്രീകൃഷ്ണൻ; സംഘപരിവാർ പ്രവർത്തകന്റെ പരാതിയിൽ ഉടമയെ അറസ്റ്റ് ചെയ്ത പോലീസ്

ആലപ്പുഴ: മന്തിക്കടയുടെ വിഷുപരസ്യത്തിൽ ശ്രീകൃഷ്ണന്റെ ചിത്രം ഉപയോഗിച്ചതിൽ കടയുടമയെ അറസ്റ്റ് ചെയ്ത്...

"பெண் தெய்வமான காளியும் கருப்பு உடைதான் அணிந்துள்ளார்.!"- மோடியின் விமர்சனத்திற்கு கனிமொழி பதிலடி

மகளிர் இடஒதுக்கீடு மசோதா மற்றும் தொகுதி மறுவரையறை மசோதா மீதான விவாதம்...

Yuvraj Singh: అభిషేక్ శర్మతో పాటు.. అతడు కూడా యువరాజ్ సింగ్ శిష్యుడే.. ఓపెనింగ్‌లో దబిడిదిబిడే..

క్రికెట్ అనేది కేవలం గణాంకాలు, స్కోర్లకే పరిమితం కాదు.. సరైన గురువుల...

ಸಚಿವ ಜಮೀರ್ ಬಗ್ಗೆ ವದಂತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು- ಬಿಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು,ಏಪ್ರಿಲ್,17,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಉಪಚುನಾವಣಾ...