7
July, 2026

A News 365Times Venture

7
Tuesday
July, 2026

A News 365Times Venture

ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ

Date:

ಬೆಂಗಳೂರು,ಜುಲೈ,6,2026 (www.justkannada.in):  ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಖಾತೆ ಬದಲಾಯಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಗೆ ನೈಜ ಹೋರಾಟಗಾರರ ವೇದಿಕೆಯಿಂದ ಪತ್ರ ಬರೆಯಲಾಗಿದೆ.

ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಪತ್ರ ಬರೆದಿರುವ ಹೆಚ್ ಎಂ ವೆಂಕಟೇಶ್, ಯತೀಂದ್ರ ಸಿದ್ದರಾಮಯ್ಯ ಕುಟುಂಬ ವಿರುದ್ದ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಇದೆ. ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೇಸ್ ಇದೆ. ಹೈಕೋರ್ಟ್ ನಲ್ಲಿ ರಿಟ್,  ಇಡಿ ಕೂಡ ಪ್ರಕರಣ ದಾಖಲಿಸಿಕೊಂಡಿದೆ.  ಮುಡಾ ಕೇಸ್ ನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ತಂದೆ ತಾಯಿ ಆರೋಪಿತರು.  ಈ ಕೇಸ್ ವಿಚಾರಣೆಯಲ್ಲಿರುವಾಗ ನಗರಾಭಿವೃದ್ದಿ ಖಾತೆ ಸರಿಯಲ್ಲ ತಕ್ಷಣ ಜಾರಿಗೆ ಬರುವಂತೆ ನಗರಾಭಿವೃದ್ದಿ ಖಾತೆ ಯಿಂದ ಬಿಡುಗಡೆಗೊಳಿಸಿ ಬದಲಿ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ.

ತಂದೆ ತಾಯಿ ರಕ್ಷಣೆಗಾಗಿ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟುತ್ತದೆ. ಆರೋಪಿತರ ಮಗ ನಗರಾಭಿವೃದ್ದಿ ಖಾತೆಯ ಅಧಿಕಾರ ಸ್ಥಾನದಿಂದ ದೂರ ಸರಿಯಬೇಕು. ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗಳು ನಡೆಸಬೇಕಾಗುತ್ತದೆ.  ಆರೋಪಿತನ ಮಗನೇ ನಗರಾಭಿವೃದ್ಧಿ ಖಾತೆ ಹೊಂದಿದ್ದರೇ ತಪ್ಪಾಗುತ್ತದೆ.   ಹಾಗಾಗಿ ನಗರಾಭಿವೃದ್ದಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಹೆಚ್ ಎಂ ವೆಂಕಟೇಶ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Key words: Letter, change,  Minister post, Yathindra Siddaramaiah,

The post ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Minister Satyakumar: అమరావతిపై జగన్‌కు మంత్రి సత్యకుమార్ సవాల్.. ఎన్నికలకు వెళ్దామా..?

Minister Satyakumar: వైఎస్‌ఆర్‌ కాంగ్రెస్‌ పార్టీ అధినేత, మాజీ ముఖ్యమంత్రి వైఎస్...

ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉ.ಕರ್ನಾಟಕ ಪ್ರವಾಸ ಆರಂಭ ಖುಷಿ ಕೊಟ್ಟಿದೆ- ಸಿಎಂ ಡಿಕೆ ಶಿವಕುಮಾರ್

ಬೀದರ್,ಜುಲೈ,6,2026 (www.justkannada.in): ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ...

ഗസയില്‍ രണ്ട് പതിറ്റാണ്ടോളം നീണ്ട ഭരണം അവസാനിപ്പിക്കുന്നതായി പ്രഖ്യാപിച്ച് ഹമാസ്

ഗസസിറ്റി: ഗസയില്‍ ഹമാസിന്റെ നേതൃത്വത്തില്‍ രണ്ട് പതിറ്റാണ്ടോളമായി ഭരണം നടത്തിയിരുന്ന ഗവണ്‍മെന്റ്...

நீதிமன்றத்தில் ஆஜராகாத அரசு வழக்கறிஞர்கள்; கலெக்டருக்கு அபராதம் விதித்த நீதிபதி; காரணம் என்ன?

கோவை மாவட்டம் கருமத்தம்பட்டியில் நடைபெற்ற ஒரு கொலை வழக்கு தொடர்பான விசாரணை,...