ವಿಜಯಪುರ,ಮೇ,15,2026 (www.justkannada.in): ಇಂಧನ ಮಿತ ಬಳಕೆಗೆ ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೆ ಬೆಂಗಾವಲು ವಾಹನ ಕಡಿಮೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ನಾಯಕರು ಬೆಂಗಾವಲು ವಾಹನ ಬಿಟ್ಟಿದ್ದಾರೆ ನಾನು ಒಂದು ಬೆಂಗಾವಲು ವಾಹನ ಬಿಟ್ಟಿದ್ದೀನಿ, ಅದು ಬೇರೆ ಮಾತು. ಸುಮ್ಮನೆ ಇವೆಲ್ಲ ನಾಟಕೀಯ ಎಂದರು.
ಮೋದಿ ಅಚ್ಚೇ ದಿನದಲ್ಲಿ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದೆ. ಆದರೂ ಮೋದಿಯ ಅಂದಭಕ್ತರು ಇನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಚಿನ್ನ ಖರೀದಿ ಬೇಡ ಅಂತಾರೆ ಈಗ ಸೈಕಲ್ ಮೇಲೆ ಹೋಗಿ ಅಂತಾರೆ. ಮನಮೋನ ಸಿಂಗ್ ಅವಧಿಯಲ್ಲಿ ಅರ್ಥ ವ್ಯವಸ್ಥೆ ಹೇಗಿತ್ತು. ಹಿಂದೆ ಪೆಟ್ರೋಲ್ ಡೀಸೆಲ್ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ನೋಡಿ ಎಂದು ಸಚಿವ ಎಂಬಿ ಪಾಟೀಲ್ ಕಿಡಿಕಾರಿದರು.
Key words: Minister, M.B. Patil, convoy vehicles, dramatic.
The post ಬೆಂಗಾವಲು ವಾಹನ ಕಡಿಮೆ ಮಾಡಿದ ವಿಚಾರ: ಇವೆಲ್ಲ ನಾಟಕೀಯ ಎಂದ ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





