6
May, 2026

A News 365Times Venture

6
Wednesday
May, 2026

A News 365Times Venture

ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ

Date:

ಕೋಲ್ಕತ್ತಾ,ಮೇ,6,2026 (www.justkannada.in):  ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರ ಬಂದ ಬಳಿಕವೂ ಸಹ ಹಿಂಸಾಚಾರ ನಿಂತಿಲ್ಲ. ಪ. ಬಂಗಾಳ ರಾಜ್ಯದ ವಿವಿಧೆಡೆ ನಡೆದ ಭೀಕರ ಸಂಘರ್ಷಗಳಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ವರು ರಾಜಕೀಯ ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಸುಮಾರು 12ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಪು ಘರ್ಷಣೆ, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ದಾಳಿ ಪ್ರಕರಣಗಳು ನಡೆದಿವೆ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ತಡರಾತ್ರಿ ನಡೆದ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತ ಮಧು ಎಂಬುವವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎನ್ನಲಾಗಿದೆ.  ಈ ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಕಿಡಿಕಾರಿದ್ದಾರೆ.

ಇತ್ತ  ವೀರಭೂಮಿಯ ನ್ಯೂಟೌನ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಎಂಬುವವರನ್ನು ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರತಿಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ನಿನ್ನೆಯಷ್ಟೇ ಟಿಎಂಸಿ ನಾಯಕರೊಬ್ಬರ ಕಚೇರಿಯನ್ನ ಧ್ವಂಸ ಮಾಡಲಾಗಿತ್ತು.

Key words: Violence, West Bengal, after, election, activists, killed

The post ಪ.ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಬಳಿಕ ನಿಲ್ಲದ  ಹಿಂಸಾಚಾರ: ನಾಲ್ವರು ಕಾರ್ಯಕರ್ತರ ಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബംഗാളില്‍ ബി.ജെ.പിയെ ജയിപ്പിച്ചത് എസ്.ഐ.ആര്‍

കൊല്‍ക്കത്ത: പശ്ചിമ ബംഗാള്‍ മുഴുവനും കാവിപുതപ്പിക്കാന്‍ ബി.ജെ.പിക്ക് വഴിയൊരുക്കിയ ഏറ്റവും വലിയ...

முரண்டு பிடிக்கும் மம்தா; 'ராஜினாமா செய்ய வேண்டும் என்பது கட்டாயமா?' அரசியல் சாசனம் சொல்வது என்ன?

2011-ம் ஆண்டு முதல் மேற்கு வங்கத்தில் தொடர்ந்து இருந்து வரும் திரிணாமுல்...

Tamil Nadu Politics: నిమిషానికో మలుపు.. విజయ్ మాస్టార్ ప్లాన్.. ఏఐఏడీఎంకేతో చర్చలు!

Vijay’s TVK Eyes AIADMK Support: తమిళనాడులో ఎన్నికల ఫలితాల తర్వాతి...

ആടിന്റെ തലയറുത്ത് പ്രതിഷേധിച്ചും കെ.ടി ജലീലിന്റെ മൃദദേഹമുണ്ടാക്കിയും ആഹ്‌ളാദ പ്രകനവുമായി മുസ്‌ലിം ലീഗ്

മലപ്പുറം: നിയമസഭാ തെരഞ്ഞെടുപ്പ് വിജയത്തിന് പിന്നാലെയുള്ള മുസ്‌ലിം ലീഗിന്റെ ആഹ്‌ളാദ പ്രകടനത്തില്‍...