16
April, 2026

A News 365Times Venture

16
Thursday
April, 2026

A News 365Times Venture

ಮೈಸೂರು ವಿವಿ: ಕಾಲೇಜುಗಳ ಸಂಯೋಜನಾ ಪ್ರಕ್ರಿಯೆ ವರದಿಗಳಿಗೆ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ

Date:

ಮೈಸೂರು,ಫೆಬ್ರವರಿ,6,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯ 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳಿಗೆ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ ದಾಖಲಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್, ದಿನಾಂಕ 05.02.2026 ರಂದು ಸಂಜೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ, 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳನ್ನು ಪರಿಶೀಲಿಸಿದ ನಂತರ, ಗಂಭೀರ ಕಾನೂನುಬದ್ಧ ಹಾಗೂ ಪ್ರಕ್ರಿಯಾತ್ಮಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ನಾನು ನನ್ನ ಸ್ಪಷ್ಟ ಅಸಮ್ಮತಿಯನ್ನು (DISSENT NOTE) ಅಧಿಕೃತವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಿಂಡಿಕೇಟ್ ನಿರ್ಣಯದ ಮೂಲಕ ಸ್ಥಳೀಯ ವಿಚಾರಣಾ ಸಮಿತಿಗಳನ್ನು ರಚಿಸದಿರುವುದು. ಸ್ಥಳೀಯ ಭೌತಿಕ ಪರಿಶೀಲನೆಗೆ ಸಂಬಂಧಿಸಿದ ವಿಶ್ವಾಸಾರ್ಹ ದಾಖಲೆಗಳ ಅಭಾವ. ವಿಚಾರಣಾ ವರದಿಗಳ ಮೇಲೆ ಸಿಂಡಿಕೇಟ್ ಸದಸ್ಯರ ಸಹಿ ಇಲ್ಲದಿರುವುದರಿಂದ ಹೊಣೆಗಾರಿಕೆಯ ಸ್ಪಷ್ಟತೆಯ ಕೊರತೆ. ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಅವರು ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ನಿಯಮಬಾಹಿರ ವಿಧಾನ ಅನುಸರಿಸಿ ಸಂಯೋಜನಾ ಪ್ರಕ್ರಿಯೆಗಳನ್ನು ನಡೆಸಿ, 2026–27ನೇ ಶೈಕ್ಷಣಿಕ ಸಾಲಿಗೂ ಅದೇ ಕ್ರಮವನ್ನು Ultra Vires ರೀತಿಯಲ್ಲಿ ಮುಂದುವರಿಸಿರುವುದು ಗಂಭೀರ ಆತಂಕದ ವಿಷಯವಾಗಿದೆ. ಈ ಅಸಮ್ಮತಿ ಸೂಚನೆ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ; ಬದಲಾಗಿ ಇದು ಮೂಲಭೂತ ಮೌಲ್ಯಗಳ ರಕ್ಷಣೆಗೆ ಸಂಬಂಧಿಸಿದೆ ಎಂದು ಡಾ. ಟಿ. ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

Key words: Mysore University, Syndicate member, Dr. T. R. Chandrashekhar

The post ಮೈಸೂರು ವಿವಿ: ಕಾಲೇಜುಗಳ ಸಂಯೋಜನಾ ಪ್ರಕ್ರಿಯೆ ವರದಿಗಳಿಗೆ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സാംബാലില്‍ വീണ്ടും ബുള്‍ഡോസര്‍രാജ്; ഈദ്ഗാഹും ഇമാംബറയും തകര്‍ത്തു; പ്രതിഷേധം

ലഖ്നൗ: ഉത്തര്‍പ്രദേശിലെ സാംബാല്‍ ജില്ലയില്‍ വീണ്ടും ബുള്‍ഡോസര്‍ രാജ്. വര്‍ഷങ്ങളായി പ്രദേശവാസികള്‍...

'ஜனநாயகன் படத்தை லீக் செய்தது யார்?' – முக்கிய குற்றவாளியைக் கைதுசெய்த சைபர் க்ரைம்

விஜய்யின் ஜனநாயகன் படம் கடந்த சில நாள்களுக்கு முன் இணையத்தில் சட்டவிரோதமாக...

Anganwadi Jobs: మహిళలకు శుభవార్త.. 108 అంగన్‌వాడీ జాబ్స్.. పరీక్ష లేకుండా ఎంపిక..!

నంద్యాల జిల్లాలోని నిరుద్యోగ మహిళలకు ఆంధ్రప్రదేశ్ ప్రభుత్వం తీపి కబురు అందించింది....

ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ

ನವದೆಹಲಿ,ಏಪ್ರಿಲ್,16,2026 (www.justkannada.in):  ಮಹಿಳಾ ಮೀಸಲಾತಿ ಕಾನೂನು ಜಾರಿಯ ಕ್ರೆಡಿಟ್ ನಮಗೆ...