9
February, 2026

A News 365Times Venture

9
Monday
February, 2026

A News 365Times Venture

SIT ದಿಕ್ಕು ತಪ್ಪಿಸುವ ಕೆಲಸ: ಪಾರದರ್ಶಕತೆ ತನಿಖೆಗೆ ಬಿಡಬೇಕು- ಒಡನಾಡಿ ಮುಖ್ಯಸ್ಥ ಸ್ಟಾನ್ಲಿ ಆಗ್ರಹ

Date:

ಮೈಸೂರು,ಆಗಸ್ಟ್,22,2025 (www.justkannada.in): ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಸ್ ಐಟಿ ತನಿಖೆ ಪಾರದರ್ಶಕತೆಯಿಂದ ನಡೆಯಲು ಬಿಡಬೇಕು ಎಂದು ಮೈಸೂರಿನಲ್ಲಿ ಜನಪರ ಸಂಘಟನೆಗಳ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಒಡನಾಡಿ ಸಂಸ್ಥೆಯ ಪರಶುರಾಮ್, ಸ್ಟಾನ್ಲಿ ಅವರು, ಎಸ್.ಐ.ಟಿ ಯಾವುದೋ ಬೀದಿ ನಾಯಿ ಅಲ್ಲ. ರಣಬೇಟೆ ಆಡಲು ಬಂದಿರುವ ಬೇಟೆಗಾರ. ಕೆಲವು ರಾಜಕಾರಣಿಗಳು, ಮಾಧ್ಯಮಗಳು, ಯೂಟ್ಯೂಬ್ ಗಳು ಸೇರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದು ಖಂಡಿತ ಫಲ ಕೊಡುವುದಿಲ್ಲ ಎಂದರು.

ಮಾಸ್ಕ್ ಮ್ಯಾನ್ ಯಾರೆಂದು ಬಹಿರಂಗ ಪಡಿಸುವುದು ಅಪರಾಧ. ಆತನಿಗೆ ಜೀವ ಭಯವಿದೆ ಅಂತ ಆತನೇ ಹೇಳಿ ರಕ್ಷಣೆ ಪಡೆದುಕೊಂಡಿದ್ದಾನೆ. ಅಂತಹದರಲ್ಲಿ ಆತನ ಹೆಸರು ಊರು ಆತನ ಕುಟುಂಬದವರನ್ನು ಮುನ್ನಲೆಗೆ ತರುವುದು ಸರಿಯಲ್ಲ. ಅಂತವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಇದನ್ನರಿತು ನಾಗರಿಕ ಸಮಾಜ ಸರಿಯಾಗಿ ವರ್ತಿಸಬೇಕು ಎಂದರು.

ಧರ್ಮಸ್ಥಳದ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಅಲ್ಲಿ ನಡೆದಿರುವ ಅಸಹಜ ಸಾವು, ಅನಾಥ ಶವಗಳ ಬಗ್ಗೆ ತನಿಖೆ ನಡೆಯಲಿ. ಸತ್ಯಾತ್ಯತೆ ಹೊರ ಬರಲಿ ಅನ್ನೋದು ಎಲ್ಲರ ಆಶಯ. ಹೋರಾಟಗಾರರನ್ನು ಬಂಧಿಸುವಂತ ಪ್ರಕ್ರಿಯೆ ನಡೆಯುತ್ತಿದೆ. ಸತ್ಯಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ದ. ಎಸ್ ಐಟಿ ತನಿಖೆ ವರದಿ ಬರುವವರೆಗೂ ಎಲ್ಲರೂ ಕಾಯಬೇಕು. ಅದನ್ನು ಬಿಟ್ಟು ನಾವೇ ಜಡ್ಜ್ ಗಳಂತೆ ಮಾತನಾಡಿ ಯಾರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ಒಡನಾಡಿ ಪರಶು, ಸ್ಟಾನ್ಲಿ ಹೇಳಿದರು.

Key words: Dharmasthala, SIT, misleading, work, investigation, Mysore, odanadi

The post SIT ದಿಕ್ಕು ತಪ್ಪಿಸುವ ಕೆಲಸ: ಪಾರದರ್ಶಕತೆ ತನಿಖೆಗೆ ಬಿಡಬೇಕು- ಒಡನಾಡಿ ಮುಖ್ಯಸ್ಥ ಸ್ಟಾನ್ಲಿ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಎ.ಆರ್.ಎ.ಐ. ಸ್ಥಾವರಕ್ಕೆ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಲಭ್ಯ: ಎಚ್ಡಿಕೆಗೆ ಎಂ ಬಿ ಪಾಟೀಲ ಪತ್ರ

  ಬೆಂಗಳೂರು ಫೆ.೦೯,೨೦೨೬ : ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು...

നരവനെയുടെ പുസ്തകം പ്രചരിപ്പിക്കുന്നതിനെതിരെ കേസെടുത്ത് ദല്‍ഹി പൊലീസ്

ന്യൂദല്‍ഹി: കരസേനാ മുന്‍ മേധാവി ജനറല്‍ എം.എ നരവനെയുടെ ‘ഫോര്‍ സ്റ്റാര്‍സ്...

OPS: '130 எம்.எல்.ஏக்கள் வருவார்கள்’ டு தனிமரம்! – சரிந்த ஓ.பி.எஸ் சாம்ராஜ்யம்

`அதிகாரத்தை விட்டுக் கொடுப்பதற்காக யாரும் அதிகாரத்துக்கு வருவதில்லை!' ஆனால், ஓ.பன்னீர்செல்வம் கொஞ்சம்...

Tragedy : పెళ్లి వేడుకలో విషాదం.. స్విమ్మింగ్ పూల్‌లో పడి బాలుడి మృతి..

హైదరాబాద్ శివార్లలోని చిలుకూరు పరిధిలో గల ఒక రిసార్ట్‌లో ఘోర విషాదం...