24
April, 2026

A News 365Times Venture

24
Friday
April, 2026

A News 365Times Venture

ಸಿಎಂ ಮೇಲೆ ಕೊಲೆ ಆರೋಪ ಮಾಡಿದವನ ಸತ್ಯವನ್ನೂ ಹೊರಗೆ ತರ್ತೇವೆ- ಶಾಸಕ ಶಿವಲಿಂಗೇಗೌಡ

Date:

ಬೆಂಗಳೂರು,ಆಗಸ್ಟ್,18,2025 (www.justkannada.in): ಕಾಂಗ್ರೆಸ್ ಧರ್ಮಸ್ಥಳದ ಪರವಾಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದವನ ಸತ್ಯವನ್ನೂ ಹೊರಗೆ ತರುತ್ತೇವೆ ಎಂದು ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದರು.

ಇಂದು ಸದನದಲ್ಲಿ ಧರ್ಮಸ್ಥಳದ ಪ್ರಕರಣ ಚರ್ಚೆಯಾಗಿದ್ದು, ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದರು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನ ಮಾಡಿದ್ದಾರೆ ಎಂದು ಮಹೇಶ್ ತಿಮರೋಡಿ ನೀಡಿದ್ದ ಹೇಳಿಕೆ ಕುರಿತೂ ಭಾರಿ ಚರ್ಚೆಯಾಯಿತು.

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಂ ಶಿವಲಿಂಗೇಗೌಡರು, ಸಿಎಂ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದ್ದಾನೆ. ಅವನ ಸತ್ಯವನ್ನೂ ನಾವು ಹೊರಗೆ ತರುತ್ತೇವೆ.  ವರದಿ ಕೊಡವವರೆಗೆ ಸುಮ್ಮನಿರಿ.  ಆ ಮಂಜುನಾಥಸ್ವಾಮಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದರು.

ಇಲ್ಲಿ ಯಾರು ನಾಟಕ ಮಾಡುತ್ತಿದ್ದಾರೆ ಗೊತ್ತಾಗುತ್ತದೆ ಇರಿ.  ಎಸ್ ಐಟಿಯಿಂದ ಮಾತ್ರ ಸತ್ಯಾಸತ್ಯತೆ ಹೊರಬರುತ್ತೆ.  ಇದಕ್ಕೆ ನಾವು ಸಿಎಂ,  ಗೃಹ ಸಚಿವರನ್ನ ಸನ್ಮಾನಿಸಬೇಕು ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

Key words:  Dharmasthala case, CM Siddaramaiah, Session, MLA, KM Shivalingegowda

The post ಸಿಎಂ ಮೇಲೆ ಕೊಲೆ ಆರೋಪ ಮಾಡಿದವನ ಸತ್ಯವನ್ನೂ ಹೊರಗೆ ತರ್ತೇವೆ- ಶಾಸಕ ಶಿವಲಿಂಗೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാനുമായുള്ള യുദ്ധം ഇസ്രഈലിന്റെ ആവശ്യപ്രകാരം; ഔദ്യോഗികമായി സ്ഥിരീകരിച്ച് യുഎസ്

വാഷിങ്ടണ്‍: ഇറാനെതിരെ അമേരിക്ക നടത്തിവരുന്ന സൈനിക നടപടികള്‍ (ഓപ്പറേഷന്‍ എപിക് ഫ്യൂറി)...

“ரத்தம், வியர்வை சிந்தி நான் வளர்த்த கட்சி, இன்று..!"- ஆம் ஆத்மியிலிருந்து ராகவ் சதா விலகல்

ஆம் ஆத்மி கட்சியின் முக்கியத் தலைவர்களில் ஒருவரான ராகவ் சதா மற்றும்...

Telangana High Court: కేసీఆర్, కేటీఆర్, హరీష్‌రావుకు హైకోర్టులో ఊరట

Telangana High Court: బీఆర్ఎస్ అధినేత కల్వకుంట్ల చంద్రశేఖర్ రావు, పార్టీ...

ಚೆಲುವಾಂಬ ಆಸ್ಪತ್ರೆಗೆ ಭೇಟಿ: ಹತ್ತೇ ನಿಮಿಷದಲ್ಲಿ ರೋಗಿಗಳ ಬೇಡಿಕೆ ಪೂರೈಸಿದ ಸಂಸದ ಯದುವೀರ್‌

ಮೈಸೂರು, ಏಪ್ರಿಲ್,24,2026 (www.justkannada.in): ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನ...