2
May, 2026

A News 365Times Venture

2
Saturday
May, 2026

A News 365Times Venture

ಪೋಲಿಸರ ಮನೆಗಳಿಗೆಯೇ ಕನ್ನ ಹಾಕಿದ ಕಳ್ಳರು: ಸ್ಥಳೀಯರಲ್ಲಿ ಆತಂಕ

Date:

ಕೊಡಗು,ಜೂನ್,20,2025 (www.justkannada.in):  ದರೋಡೆಕೋರರು, ಕಳ್ಳರನ್ನ ಹಿಡಿಯುವ  ಪೋಲಿಸರ ಮನೆಗಳಿಗೆಯೇ ಚಾಲಾಕಿ ಕಳ್ಳರು ಕನ್ನ ಹಾಕಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯಲ್ಲಿ ಮೈತ್ರಿಹಾಲ್ ಪಕ್ಕದಲ್ಲಿರುವ 8 ಪೋಲಿಸ್ ವಸತಿ ಗೃಹಗಳಲ್ಲಿ ರಾತ್ರಿ ಕಳ್ಳತನ ನಡೆದಿದೆ. ಸ್ವಲ್ಪ ದೂರದಲ್ಲೇ ಪೋಲಿಸ್ ಠಾಣೆ ಇದ್ದರೂಸಹ ದರೋಡೆಕೋರರು ಭಯ ಪಡೆದ ತಮ್ಮ ಕೈಚಳಕ ತೋರಿಸಿದ್ದಾರೆ.

ಕ್ರೈಂ ನಡೆದು ಕೆಲವೇ ಗಂಟೆಗಳಲ್ಲಿ ಕಳ್ಳರ ಎಡೆಮುರಿ ಕಟ್ಟುವ ಪೋಲಿಸ್ ವಸತಿ ಗೃಹಗಳಿಗೆಯೇ ಭದ್ರತೆ ಇಲ್ಲದಂತಾಗಿದೆ. ಒಂದೇ ರಾತ್ರಿಯಲ್ಲಿ 8 ಪೋಲಿಸ್ ವಸತಿ ಗೃಹಗಳಲ್ಲಿ ಕಳ್ಳರು ಕಳ್ಳತನವೆಸಗಿದ್ದು, ಮನೆಯಲ್ಲಿದ್ದ ಸಣ್ಣಪುಟ್ಟ ವಸ್ತುಗಳನ್ನ ದೋಚಿ ಪರಾರಿಯಾಗಿದ್ದಾರೆ.

ಕಳ್ಳರ ಕಳ್ಳತನದಿಂದ  ಪೋಲಿಸ್ ಕುಟುಂಬ ಬೆಚ್ಚಿಬಿದ್ದಿದ್ದು ಕಳ್ಳತನ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಇನ್ನು ಸ್ಥಳಕ್ಕೆ ಶ್ವಾನ‌ದಳ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿ ಕೊಡಗು ಪೋಲಿಸರು ಕಳ್ಳರ ಬೇಟೆಗಿಳಿದಿದ್ದಾರೆ.vtu

Key words:  Thieves, police, houses, Madikeri

The post ಪೋಲಿಸರ ಮನೆಗಳಿಗೆಯೇ ಕನ್ನ ಹಾಕಿದ ಕಳ್ಳರು: ಸ್ಥಳೀಯರಲ್ಲಿ ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഞങ്ങള്‍ കടല്‍ക്കൊള്ളക്കാരെപ്പോലെ’; ഇറാനിയന്‍ കപ്പലുകള്‍ പിടിച്ചെടുക്കുന്നതിനെക്കുറിച്ച് ട്രംപ്

വാഷിങ്ടണ്‍: ഹോര്‍മുസ് കടലിടുക്കില്‍ ഇറാനിയന്‍ കപ്പലുകള്‍ പിടിച്ചെടുക്കുന്ന യു.എസ് നാവികസേനയുടെ നീക്കത്തെ...

`மனக்குமுறல்கள் போராட்டமாக வெடிப்பது இயல்புதான்' – கோவையில் செல்வப்பெருந்தகை பேட்டி

தமிழ்நாடு அரசியல் களத்தில் பரபரப்பாக 2026 சட்டமன்றத் தேர்தல் நடந்து முடிந்திருக்கிறது....

KKR Vs SRH: సన్ రైజర్స్ హైదరాబాద్ ఆరో విజయానికి బ్రేక్..? కేకేఆర్‌లోకి స్టార్ ప్లేయర్ ఎంట్రీ..

రేపు (మే3,2026) ఆదివారం మధ్యాహ్నం 3:30 గంటలకు ఉప్పల్ స్టేడియంలో సన్‌రైజర్స్...

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಿನ್ನೆಲೆ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು

ಬೆಂಗಳೂರು,ಮೇ,2,2026 (www.justkannada.in):  ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ...