23
April, 2026

A News 365Times Venture

23
Thursday
April, 2026

A News 365Times Venture

ಆನ್ ಲೈನ್ ಮೂಲಕ 1.52 ಕೋಟಿ ರೂ. ವಂಚನೆ: ದೂರು ದಾಖಲು

Date:

ಮೈಸೂರು,ಏಪ್ರಿಲ್,14,2025 (www.justkannada.in): ವಂಚಕರು ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್  ಇಬ್ಬರಿಗೆ  ಆನ್ ಲೈನ್ ಮೂಲಕ ವಂಚಿಸಿ 1.52 ಕೋಟಿ ಪಂಗನಾಮ ಹಾಕಿರುವ ಘಟನ ಮೈಸೂರಿನಲ್ಲಿ ನಡೆದಿದೆ.

ಗಾಯತ್ರಿಪುರಂ ನಿವಾಸಿ ಹಾಗೂ ಕನಕದಾಸ‌ನಗರದ ನಿವಾಸಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಖದೀಮರು 1.52 ಕೋಟಿ ರೂ ವಂಚನೆ ಮಾಡಿದ್ದಾರೆ.

ಹೆಚ್ಚಿನ ಹಣದ ಆಸೆಗೆ ಬಿದ್ದ ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ಇಬ್ಬರು ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.  ವಂಚಕರು ಇನ್ ಸ್ಟಾಗ್ರಾಂ ಮೂಲಕ ಷೇರು ಮಾರುಕಟ್ಟೆಯ ವಿಡಿಯೋ ಪ್ರದರ್ಶನ ಮಾಡಿದ್ದು, ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್ ವಿಡಿಯೋ ನಂಬಿ ಮೆಸೇಜ್ ಮಾಡಿದಾಗ ಆಪ್ಸ್ ಟಾಕ್ಸ್ ವ್ಯಾಲ್ಯೂ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಮಾಡಿದ್ದಾರೆ. ಆರಂಭದಲ್ಲಿ ಲಾಭ ತೋರಿಸಿದ ವಂಚಕರು ನಂತರ ‌ ಹಂತ- ಹಂತವಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಂತ ಹೇಳಿ 11.80 ಲಕ್ಷ ರೂ.  ಹಣ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಲಾಗಿದೆ. ಮುಂಬೈ ಪೊಲೀಸ್ ಅಂತ ನಿವೃತ್ತ ಅಧಿಕಾರಿಗೆ  ಕರೆ ಮಾಡಿದ ವಂಚಕರು ಕೆಲವು ಅಪರಾಧ ಕೃತ್ಯದಲ್ಲಿ ನೀವು ಭಾಗಿಯಾಗಿದ್ದೀರಿ. ನಿಮ್ಮ ಖಾತೆಗಳನ್ನ ಸೀಜ್ ಮಾಡಲಾಗುವುದು ಎಂದು ಎಂದು ಬೆದರಿಕೆ  ಹಾಕಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರುಗಳು ದಾಖಲಾಗಿದೆ.

Key words: Online fraud,  of Rs 1.52 crore,  Complaint, Mysore

The post ಆನ್ ಲೈನ್ ಮೂಲಕ 1.52 ಕೋಟಿ ರೂ. ವಂಚನೆ: ದೂರು ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

`சாதி, மதமற்றவர்' சான்றிதழ்; நடைமுறை எதார்த்தமும் சட்டச் சிக்கல்களும் – ஓர் ஆழமான அலசல்!

நடிகர் பார்த்திபன் ஹைதராபாத் நிகழ்ச்சியில் தனது சாதி குறித்துப் பேசியது விமர்சனத்திற்குள்ளான...

Amazon Great India Summer Sale: అమెజాన్ సమ్మర్ సేల్‌లో.. ల్యాప్‌టాప్‌లు, స్మార్ట్‌ఫోన్‌లు సగం కంటే తక్కువ ధరకే!

అమెజాన్ గ్రేట్ ఇండియా సమ్మర్ సేల్‌ను ప్రారంభిస్తోంది. ఈ సేల్ మే...

ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ತತ್ವ, ಸಿದ್ದಾಂತ ಬೆಳೆಯಲು ಸಾಧ್ಯ- ಮಲ್ಲಿಕಾರ್ಜುನ ಖರ್ಗೆ

ಬೀದರ್,ಏಪ್ರಿಲ್,22,2026 (www.justkannada.in): ಬಸವ ತತ್ವ, ಸಿದ್ಧಾಂತಗಳ ಬಗ್ಗೆ ಬಹಳಷ್ಟು ಜನರು...

പ്രധാനമന്ത്രിക്കെതിരായ ‘ഭീകരവാദി’ പരാമര്‍ശം: ബി.ജെ.പി പരാതി നല്‍കി പിറ്റേന്ന് ഖാര്‍ഗെയ്ക്ക് തെര. കമ്മീഷന്‍ നോട്ടീസ്

  ന്യൂദല്‍ഹി: പ്രധാനമന്ത്രി നരേന്ദ്ര മോദിക്കെതിരായ ‘ഭീകരവാദി’ പരാമര്‍ശത്തില്‍ കോണ്‍ഗ്രസ് അധ്യക്ഷന്‍...