11
September, 2026

A News 365Times Venture

11
Friday
September, 2026

A News 365Times Venture

ಮಣ್ಣಿನ ಗಣೇಶನ ಮೂಲಕ ಪರಿಸರ ಪಾಠ… ಮಕ್ಕಳ ಕೈಯಲ್ಲಿ ಮೂಡಿದ ಸುಸ್ಥಿರ ಮೈಸೂರಿನ ಕನಸು!

Date:

 

ಮೈಸೂರು, ಸೆ.10: ಗಣೇಶೋತ್ಸವದ ಸಂಭ್ರಮದ ಜತೆಗೆ ಪರಿಸರ ಸಂರಕ್ಷಣೆಯ ಸಂದೇಶವೂ ಮೊಳಗಬೇಕು ಎಂಬ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ. ಮಕ್ಕಳ ಕೈಯಲ್ಲಿ ಮಣ್ಣಿನ ಗಣೇಶನನ್ನು ರೂಪಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕರೆ ನೀಡಿದೆ.

ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ. ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಕಾರ್ಯಾಗಾರ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಆಯುಕ್ತರು, ಪರಿಸರ ಕಾಳಜಿಯ ಸಂದೇಶವನ್ನು ಮಕ್ಕಳ ಮೂಲಕ ಮನೆ-ಮನೆಗೆ ತಲುಪಿಸುವಂತೆ ಕರೆ ನೀಡಿದರು.

“ಪರಿಸರ ಸಂರಕ್ಷಣೆಯ ಜಾಗೃತಿ ಮಕ್ಕಳಿಂದಲೇ ಆರಂಭವಾಗಬೇಕು. ಮಕ್ಕಳು ಈ ಸಂದೇಶದ ಅತ್ಯುತ್ತಮ ರಾಯಭಾರಿಗಳಾಗಬೇಕು.”  ಎಂದರು.

ಪಿಒಪಿ ಮೂರ್ತಿಗಳು ಹಾಗೂ ರಾಸಾಯನಿಕ ಬಣ್ಣಗಳಿಂದ ಜಲಮೂಲಗಳಿಗೆ ಆಗುತ್ತಿರುವ ಹಾನಿ ಹಿನ್ನೆಲೆಯಲ್ಲಿ, ನೈಸರ್ಗಿಕ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸುವ ಅಭ್ಯಾಸ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮದೇ ಕೈಗಳಿಂದ ಆಕರ್ಷಕ ಮಣ್ಣಿನ ಗಣೇಶ ಮೂರ್ತಿಗಳನ್ನು ರೂಪಿಸಿದರು. ಸೃಜನಶೀಲತೆ, ಪರಿಸರ ಕಾಳಜಿ ಮತ್ತು ಸಂಪ್ರದಾಯ—ಮೂರನ್ನೂ ಒಂದೇ ವೇದಿಕೆಯಲ್ಲಿ ಬೆಸೆದ ಕಾರ್ಯಕ್ರಮ ಇದಾಗಿತ್ತು.

ವಿಜೇತರು

ಪ್ರೌಢಶಾಲಾ ವಿಭಾಗ:

🥇 ವಿಶಾಲ್ — 8ನೇ ತರಗತಿ, ಸದ್ವಿದ್ಯಾ ಶಾಲೆ

🥈 ಸಂಜನಾ — 10ನೇ ತರಗತಿ, ಸದ್ವಿದ್ಯಾ ಶಾಲೆ

🥉 ಪ್ರೀತಮ್ — 10ನೇ ತರಗತಿ, ಸದ್ವಿದ್ಯಾ ಶಾಲೆ

ಪ್ರಾಥಮಿಕ ಶಾಲಾ ವಿಭಾಗ:

🥇 ಮಿಥುನ್ ಎಸ್. — 6ನೇ ತರಗತಿ, GSSS

🥈 ವಿಭಾಶ್ರೀ — 5ನೇ ತರಗತಿ, GBSE ಶಾಲೆ

🥉 ಚಿನ್ಮಯ್ — 7ನೇ ತರಗತಿ, ಪ್ರಗತಿ ವಿದ್ಯಾಕೇಂದ್ರ

ವಿಜೇತ ವಿದ್ಯಾರ್ಥಿಗಳನ್ನು ಆಯುಕ್ತೆ ಸವಿತಾ ಎಂ.ಕೆ. ಅಭಿನಂದಿಸಿ ಬಹುಮಾನ ವಿತರಿಸಿದರು.

ಮಣ್ಣಿನ ಗಣೇಶ… ಮಕ್ಕಳ ಕೈಯಲ್ಲಿ ಮೂಡಿದ ಪರಿಸರ ಸಂದೇಶ…

ಈ ಗಣೇಶೋತ್ಸವದಲ್ಲಿ ಒಂದು ಮೂರ್ತಿಯನ್ನು ಮನೆಗೆ ತರುವುದಷ್ಟೇ ಅಲ್ಲ, ಒಂದು ಪರಿಸರ ಜವಾಬ್ದಾರಿಯನ್ನೂ ಮನೆಗೆ ಕೊಂಡೊಯ್ಯೋಣ ಎಂಬ ಪ್ರೇರಣೆಯನ್ನು ಪಾಲಿಕೆಯ ಈ ಕಾರ್ಯಕ್ರಮ ನೀಡಿದೆ.

Key words: Kids, Shape Eco-Friendly, Ganesha, Inspire, a Greener, Mysuru

ENGLISH SUMMARY: 

Kids Shape Eco-Friendly Ganesha, Inspire a Greener Mysuru

Mysuru, Sept. 10: Mysuru City Corporation organized an eco-friendly clay Ganesha idol-making workshop for students under the leadership of Commissioner Savitha M.K. The initiative aimed to create awareness about the harmful impact of Plaster of Paris idols and chemical colours on water bodies and the environment.

Commissioner Savitha urged children to become “environment ambassadors” and spread the message of an eco-friendly Ganesha festival in their homes and communities. Students enthusiastically crafted clay idols, with winners felicitated and prizes distributed by the Commissioner. A beautiful message from little hands: Celebrate tradition, protect nature!

The post ಮಣ್ಣಿನ ಗಣೇಶನ ಮೂಲಕ ಪರಿಸರ ಪಾಠ… ಮಕ್ಕಳ ಕೈಯಲ್ಲಿ ಮೂಡಿದ ಸುಸ್ಥಿರ ಮೈಸೂರಿನ ಕನಸು! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സത്യ നികേതന്‍ ഹോസ്റ്റല്‍ അപകടം; നടത്തിപ്പുകാര്‍ക്ക് അപകട മുന്നറിയിപ്പ് നല്‍കിയിരുന്നതായി തൊഴിലാളി

ന്യൂദല്‍ഹി: ദല്‍ഹി സത്യ നികേതനില്‍ ഹോസ്റ്റല്‍ കെട്ടിടം തകരുന്നതിന് മണിക്കൂറുകള്‍ക്ക് മുമ്പ്...

பாளையங்கோட்டை: குப்பைக் கிடங்காக மாறி வரும் பிரதான சாலை… அலட்சியம் தவிர்ப்பார்களா அதிகாரிகள்?

தென்னகத்தின் ஆக்ஸ்போர்ட் என அழைக்கப்படும் பாளையங்கோட்டையில், சுமார் 2 கி.மீ பரப்பளவிற்குள்...

BRICS Summit 2026: పుతిన్-మోడీ-జిన్‌పింగ్.. ప్రపంచం చూపంతా ఢిల్లీ వైపే!

BRICS Summit 2026: భారత్ మరోసారి అంతర్జాతీయ కార్యక్రమానికి వేదికగా మారుతోంది....

ಕೈ’ ನಾಯಕ ರಾಹುಲ್ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ,ಸೆಪ್ಟಂಬರ್,11,2026 (www.jstkannada.in); ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು...