ಬೆಂಗಳೂರು,ಮೇ,28,2026 (www.justkannada.in) : ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ವಿಚಾರ ಕುರಿತು ಮಾತನಾಡಿದ ಎಂಎಲ್ ಸಿ ಲಖನ್ ಜಾರಕಿಹೊಳಿ, ಸಿದ್ದರಾಮಯ್ಯ 3 ವರ್ಷ ಆರ್ಥಿಕ ಪರಿಸ್ಥಿತಿಗೆ ಸಮಸ್ತೆ ಆಗದಂತೆ ನೀಗಿಸಿದರು. ತೊಂದರೆ ಆಗದಂತೆ ನೋಡಿಕೊಂಡರು. ಸಿದ್ದರಾಮಯ್ಯ ಕಾರಣಕ್ಕೆ ಸಮಸ್ಯೆ ಆಗದಂತೆ ಯೋಜನೆ ಜಾರಿ ಮಾಡಿದರು ಎಂದರು.
ಇನ್ಮುಂದೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸ್ಟಾಪ್ ಆಗುತ್ತವೆ. ಸರ್ಕಾರಿ ನೌಕರರ ಸಂಬಳ ಕೋಡೋಕು ಆಗಲ್ಲ. ಅಂದು ವೀರೇಂದ್ರ ಪಾಟೀಲ್ ಇಳಿಸಿ ಲಿಂಗಾಯತರಿಗೆ ಅನ್ಯಾಯ ಮಾಡಿದರು. ಇಂದು ಸಿದ್ದರಾಮಯ್ಯ ಇಳಿಸಿ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತೆ. 2028ಕ್ಕೆ ಕಾಂಗ್ರೆಸ್ 40 ಸ್ಥಾನ ಗೆಲ್ಲೋದಕ್ಕೂ ಸಾಧ್ಯವಿಲ್ಲ ಎಂದು ಲಖನ್ ಜಾರಕಿಹೊಳಿ ತಿಳಿಸಿದರು.
Key words: Siddaramaiah, CM, resigns, MLC, Lakhan Jarakiholi
The post ಇನ್ಮುಂದೆ ಗ್ಯಾರಂಟಿಗಳು ಸ್ಟಾಪ್: ಸಿದ್ದರಾಮಯ್ಯ ರಾಜೀನಾಮೆ ‘ಕೈ’ ಪತನಕ್ಕೆ ಕಾರಣ- ಭವಿಷ್ಯ ನುಡಿದ MLC appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





