ಬೆಂಗಳೂರು,ಜುಲೈ,30,2026 (www.justkannada.in): ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಬೆನ್ನಲ್ಲೆ ಇದೀಗ ಕರ್ನಾಟಕಕ್ಕೆಕೇಂದ್ ಜಲ ಆಯೋಗವು ಶಾಕ್ ನೀಡಿದೆ.
ಮೇಕೆದಾಟು ಡಿಪಿಆರ್ ಅನ್ನು ಕೇಂದ್ರ ಜಲಶಕ್ತಿ ಆಯೋಗ ವಾಪಸ್ ಕಳುಹಿಸಿದೆ. ಡಿಪಿಆರ್ ನಲ್ಲಿರುವ ಕೆಲ ಅಂಶ ಮಾರ್ಪಡಿಸಿ ಪರಿಸ್ಕೃತ ವರದಿ ಸಲ್ಲಿಸುವಂತೆ ಸಿಡಬ್ಲ್ಯು ಸಿ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರ ನೀರಿನ ಬಳಕೆಯ ಪ್ರಮಾಣ ಹೆಚ್ಚಿಸಿತ್ತು. ಬೆಂಗಳೂರು ಕುಡಿಯುವ ನೀರಿಗಾಗಿ 6.96 ಟಿಎಂಸಿ ಕೇಳಿತ್ತು. ಆದರೆ ಸರ್ಕಾರ ಹಳೆಯ ಹಾಗೂ ಅಪೂರ್ಣ ಅಂಕಿಅಂಶ ನೀಡಿತ್ತು ಎನ್ನಲಾಗಿದೆ. ಹೀಗಾಗಿ ಕೆಲವು ಅಂಶಗಳ ಬಗ್ಗೆ ಕೇಂದ್ರ ಜಲಶಕ್ತಿ ಆಯೋಗ ಸ್ಪಷ್ಟನೆ ಕೇಳಿದೆ.
Key words: Karnataka, Central Water Commission, sends back, Mekedatu, DPR
The post ಕರ್ನಾಟಕಕ್ಕೆ ಮತ್ತೊಂದು ಶಾಕ್: ಮೇಕೆದಾಟು ಡಿಪಿಆರ್ ವಾಪಸ್ ಕಳುಹಿಸಿದ ಕೇಂದ್ ಜಲ ಆಯೋಗ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





