ದಾವಣಗೆರೆ,ಏಪ್ರಿಲ್,14,2026 (www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿದ ನಂತರವೂ ವಾಕ್ಸಮರ ಮುಂದುವರೆದಿದ್ದು ಸ್ವಾಮೀಜಿ ವಿರುದ್ದ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಮಠದ ಟ್ರಸ್ಟ್ ಸದಸ್ಯ ಚಂದ್ರ ಶೇಖರ ಪೂಜಾರ, ವಚನಾನಂದ ಸ್ವಾಮೀಜಿ ಮಸಾಜ್ ಪ್ರಿಯರಾಗಿದ್ದಾರೆ. ಅನಾಥ ಮಕ್ಕಳ ಜೊತೆ ವಿಕೃತವಾಗಿ ನಡೆದುಕೊಂಡಿದ್ದಾರೆ. ವಚನಾನಂದ ಸ್ವಾಮೀಜಿ ವಿರುದ್ದ ಫೋಕ್ಸೋ ಕೇಸ್ ದಾಖಲಿಸಬೇಕಿತ್ತು ದಾಖಲಿಸಿದ್ದರೆ ಅವರ ಬಂಧನ ಆಗುತ್ತಿತ್ತು ಆದರ ನಾವು ಅ ಕೆಲಸ ಮಾಡಲಿಲ್ಲ ಎಂದಿದ್ದಾರೆ.
ಸ್ವಾಮೀಜಿ ಮಠ ಬಿಡಲ್ಲ ಎಂಬ ಭಂಡತನ ಮಾಡಬಹುದು ಅದರೆ ಹೇಗೆ ಮಠದಿಂದ ಬಿಡುಗಡೆ ಮಾಡಬಹುದು ಎಂದು ಗೊತ್ತಿದೆ ಎಂದು ಚಂದ್ರ ಶೇಖರ್ ಪೂಜಾರ ತಿಳಿಸಿದ್ದಾರೆ.
Key words: POCSO case, Vachanananda Swamiji , trust, member
The post ವಚನಾನಂದ ಸ್ವಾಮೀಜಿ ವಿರುದ್ದ ಪೋಕ್ಸೋ ಕೇಸ್ ದಾಖಲಿಸಬೇಕಿತ್ತು- ಮಠದ ಟ್ರಸ್ಟ್ ಸದಸ್ಯ ಗಂಭೀರ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





