3
May, 2026

A News 365Times Venture

3
Sunday
May, 2026

A News 365Times Venture

ಮೈಸೂರು: ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು

Date:

ಮೈಸೂರು,ಜುಲೈ,21,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ನಡೆದಿದ್ದ  ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಂದ್ದಿದ್ದ ವ್ಯಕ್ತಿಯೊಬ್ಬರು  ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತುರುಗನೂರು ಗ್ರಾಮದ ಕುಮಾರ್ (39) ಮೃತಪಟ್ಟ ವ್ಯಕ್ತಿ. ಜುಲೈ 19ರಂದು  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ  ಕಾಂಗ್ರೆಸ್ ನ ಸಾಧನಾ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

ಈ ನಡುವೆ 300 ರೂಪಾಯಿ ಕೊಡುತ್ತೇವೆ ಎಂದು ಸಮಾವೇಶಕ್ಕೆ ತುರುಗೂರಿನ ಕಾಂಗ್ರೆಸ್ ಮುಖಂಡರು ಕುಮಾರ್ ನನ್ನು ಕರೆತಂದಿದ್ದರಂತೆ. ಆದರೆ ಕಾಂಗ್ರೆಸ್ ಸಮಾವೇಶ ಮುಗಿದರೂ ಕುಮಾರ್ ಮನೆಗೆ ವಾಪಸ್  ಆಗಿರಲಿಲ್ಲ. ರಾತ್ರಿಯಾದರೂ ಕುಮಾರ್ ಮನೆಗೆ  ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕುಟುಂಬದವರು ಬನ್ನೂರು ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ಈ ವೇಳೆ ಪೊಲೀಸರು ಮೈಸೂರು ನಗರ ಠಾಣೆಯಲ್ಲಿ ದೂರು ನೀಡಿ ಎಂದು ಹೇಳಿ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಮೈಸೂರು ಠಾಣೆಯಲ್ಲಿ ದೂರು ನೀಡಿದ್ದು, ಇಂದು ಮೈಸೂರಿನ ಶವಾಗಾರದಲ್ಲಿ ಕುಮಾರ್ ಮೃತದೇಹ ಪತ್ತೆಯಾಗಿದೆ. ಮದ್ಯಪಾನ ಜಾಸ್ತಿಯಾಗಿ ಕುಮಾರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ.vtu

Key words: Mysore, man, death, Congress, Sadhana convention

The post ಮೈಸೂರು: ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അമേരിക്കന്‍ ഭീഷണികള്‍ ചൈനയ്ക്ക് മേല്‍ വിലപ്പോകില്ല; റിഫൈനറികള്‍ക്കുള്ള യു.എസ് ഉപരോധം നടപ്പിലാക്കാനാവില്ലെന്ന് വാണിജ്യകാര്യ മന്ത്രാലയം

ഷാങ്ഹായ്: ഇറാനിയന്‍ എണ്ണ വാങ്ങിയതായി ആരോപിച്ച് ചൈനീസ് റിഫൈനറിക്കെതിരെ യു.എസ് ഏര്‍പ്പെടുത്തിയ...

"சேவை செய்யவே சீருடை" – நடுரோட்டில் பாஜக அமைச்சருடன் வாக்குவாதம் செய்த பெண்ணின் புது வீடியோ வைரல்

கடந்த வாரம் பாராளுமன்றத்தில் மகளிர் இட ஒதுக்கீடு மசோதா தோல்வி அடைந்ததற்கு...

Raashii Khanna: పోలీస్ ఆఫీసర్‌గా రాశీ ఖన్నా.. ‘లుఖ్కే’ వెబ్ సిరీస్ క్రేజీ అప్‌డేట్!

టాలీవుడ్ బ్యూటీ రాశీ ఖన్నా ఇప్పుడు పవర్‌ఫుల్ పోలీస్ ఆఫీసర్‌గా తన...

ವಿದ್ಯುತ್‌ ವ್ಯತ್ಯಯ ದೂರಿಗೆ ವಾಟ್ಸ್‌ ಆಪ್‌, ಸಾಮಾಜಿಕ ಜಾಲತಾಣ ಬಳಸಿ: ಬೆಸ್ಕಾಂ ಮನವಿ

ಬೆಂಗಳೂರು,ಮೇ,2,2026 (www.justkannada.in): ವಿದ್ಯುತ್‌ ಸಂಬಂಧಿತ ದೂರುಗಳನ್ನು ದಾಖಲಿಸಲು ವಾಟ್ಸಪ್‌ ಸಹಾಯವಾಣಿ...