17
May, 2025

A News 365Times Venture

17
Saturday
May, 2025

A News 365Times Venture

ಬಿಸಿಯೂಟ: ಗೊಂದಲಕ್ಕೆ ಎಡೆಮಾಡಿದ ಸರಕಾರದ ಆದೇಶ..!

Date:

ಬೆಂಗಳೂರು,ಮಾರ್ಚ್,28,2025 (www.justkannada.in): ಶಾಲೆಗಳಲ್ಲಿ ಕೆಲವು ದಿನಗಳಲ್ಲಿ ಬೇಸಿಗೆ ರಜೆಯ ಪ್ರಾರಂಭವಾಗಲಿದ್ದು ಈ ಮಧ್ಯೆ ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶವೊಂದನ್ನ ಹೊರಡಿಸಿದ್ದು  ಈ ಆದೇಶ ಇದೀಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಶಾಲೆಗಳಲ್ಲಿ ಬಿಸಿಯೂಟ ಮಾಡುವ ಅಡುಗೆ ತಯಾರಕರು,  ಸಹಾಯಕರನ್ನ ಮಾರ್ಚ್ 31ಕ್ಕೆ  ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಏಪ್ರಿಲ್ 10ರವರೆಗೂ ಶಾಲೆಗಳನ್ನ ನಡೆಸಬೇಕು. ಮಕ್ಕಳಿಗೆ  ಬಿಸಿಯೂಟ ಮೊಟ್ಟೆ ಹಾಲು  ಕೊಡಬೇಕು  ಎಂದು ಸರ್ಕಾರ ಸೂಚಿಸಿದೆ. ಈ ನಡುವೆ ಬಿಸಿಯೂಟ ಅಡುಗೆ ತಯಾರಕರು,  ಸಹಾಯಕರನ್ನ ಮಾರ್ಚ್ 31ಕ್ಕೆ ಬಿಡುಗಡೆಗೊಳಿದರೇ ಏಪ್ರಿಲ್ 10ರವರೆಗೂ  ಮಕ್ಕಳಿಗೆ ಬಿಸಿಯೂಟ  ಯಾರು ತಯಾರು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಬವಿಸಿದೆ.

ಅಡುಗೆ ತಯಾರಕರು ಸಹಾಯಕರನ್ನ ಬಿಡುಗಡೆ ಮಾಡಲು ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, 2024-25 ನೇ ಸಾಲಿನ ಪಿಎಂ ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಜೂನ್-204 ಮಾಹೆಯಿಂದ ಮಾರ್ಚ್-2025 ರ ಮಾಹೆಯವರೆಗೆ ಒಟ್ಟು 10 ತಿಂಗಳ ಅವಧಿಗೆ ಯೋಜನೆಯನ್ನು ನಡೆಸಲು ಅನುಮೋದನೆ ನೀಡಿರುತ್ತದೆ. ಸದರಿ ಅವಧಿಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಅಡುಗೆ ತಯಾರಿಸಿ ವಿತರಿಸುವ ಕೆಲಸಕ್ಕೆ ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆದುಕೊಂಡಿದ್ದು, ಈ ಅವಧಿಗೆ ಮಾಸಿಕ ಗೌರವ ಸಂಭಾವನೆಯನ್ನು ವಿತರಿಸಲಾಗಿದೆ.

2024-25ನೇ ಸಾಲಿನಲ್ಲಿ ಯೋಜನೆಯ ಅವಧಿ 31ನೇ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಯೋಜನೆಯಡಿ ತಾತ್ಕಾಲಿಕವಾಗಿ ಸೇವೆ ನಿರ್ವಹಿಸಿದ ಅಡುಗೆ ಸಿಬ್ಬಂದಿಯನ್ನು ದಿನಾಂಕ: 31.3.2025ರಂದು ಬಿಡುಗಡೆಗೊಳಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಲು ತಿಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಆದರೆ ಶಾಲೆಗಳು ಏಪ್ರಿಲ್ 10ರವರೆಗೂ ತೆರೆದಿರುತ್ತವೆ. ಜೊತೆಗೆ ಮಕ್ಕಳಿಗೆ ಬಿಸಿಯೂಟ ಮೊಟ್ಟೆ ಹಾಲು ವಿತರಿಸಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ಇದೀಗ ಮಾರ್ಚ್ 31ಕ್ಕೆ ಬಿಸಿಯೂಟ ಅಡುಗೆ ತಯಾರಕರು,  ಸಹಾಯಕರನ್ನ ಬಿಡುಗಡೆಗೊಳಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಸಾಕಷ್ಟು ಗೊಂದಲವನ್ನುಂಟು ಮಾಡಿದೆ.

Key words: School, bisiyuta, Government order, confusion

The post ಬಿಸಿಯೂಟ: ಗೊಂದಲಕ್ಕೆ ಎಡೆಮಾಡಿದ ಸರಕಾರದ ಆದೇಶ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೈಸೂರು: ಆಕಸ್ಮಿಕ ಅಗ್ನಿ ಅವಘಡ: 3 ಮನೆಗಳು ಸುಟ್ಟು ಕರಕಲು

ಮೈಸೂರು,ಮೇ,17,2025 (www.justkannada.in): ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು...

‘ഇന്ത്യയുടെ എത്ര യുദ്ധ വിമാനങ്ങള്‍ നഷ്ടമായി? ഇന്ത്യന്‍ നീക്കം പാക്കിസ്ഥാനെ അറിയിച്ചെന്ന വിദേശകാര്യമന്ത്രിയുടെ പരാമര്‍ശത്തെ വിമര്‍ശിച്ച് രാഹുല്‍ ഗാന്ധി

ന്യൂദല്‍ഹി: ഭീകര കേന്ദ്രങ്ങള്‍ക്ക് എതിരെ മാത്രമായിരുന്നു ആക്രമണമെന്ന് തുടക്കത്തില്‍ പാക്കിസ്ഥാനെ അറിയിച്ചിരുന്നുവെന്ന...

NEP: `தேசிய கல்விக் கொள்கை 2020 எனும் மதயானை' – அன்பில் மகேஷ் எழுதிய புத்தகத்தை வெளியிட்ட முதல்வர்!

பள்ளிக்கல்வித்துறை அமைச்சர் அன்பில் மகேஷ் பொய்யாமொழி எழுதிய `தேசிய கல்விக் கொள்கை...

Jagdeep Dhankhar: “ఒసామా బిన్ లాడెన్” హత్య లాగే భారత్ చేసి చూపించింది..

Jagdeep Dhankhar: భారత్ పాకిస్తాన్‌పై నిర్వహించిన ‘‘ఆపరేషన్ సిందూర్’’‌ని ఉపరాష్ట్రపతి జగదీప్...