21
August, 2026

A News 365Times Venture

21
Friday
August, 2026

A News 365Times Venture

ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರು ದಾಖಲೆ ಸಲ್ಲಿಸಿದರೆ “ ಭೂ ಪರಿಹಾರ “: ಡಾ.ಯತೀಂದ್ರ ಸಿದ್ದರಾಮಯ್ಯ

Date:

ಮೈಸೂರು, ಫೆ. 21: ಮಾನವೀಯತೆಯ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆ ಆಧರಿಸಿ ಸರ್ಕಾರ ಪರಿಹಾರ ನೀಡುತ್ತಿದೆ. ಉಳುಮೆ ಮಾಡುತ್ತಿರುವ  ದಾಖಲೆ ಸಲ್ಲಿಸಿ ಪರಿಹಾರ ಪಡೆಯುವಂತೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಸರ್ಕಾರಿ ಗೋಮಾಳದಲ್ಲಿ ಸುಮಾರು 150ಕ್ಕೂ ಹೆಚ್ಚು ರೈತ ಕುಟುಂಬದವರು ಉಳಿಮೆ ಮಾಡಿ ಜೀವನ ಸಾಗಿಸುತ್ತಿದ್ದು ಈ ಗೋಮಾಳವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ವಶಕ್ಕೆ ಪಡೆದುಕೊಂಡು ರೈತರಿಗೆ ಯಾವುದೇ ಭೂ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆಗಳನ್ನು ಪಡೆದುಕೊಂಡು ಸರ್ಕಾರ ಪರಿಹಾರ ನೀಡುತ್ತಿದೆ. ಈ ಭೂಮಿಯಲ್ಲಿ ನೀವು ಉಳುಮೆ ಮಾಡುತ್ತಿದ್ದು ನಿಮ್ಮಲ್ಲಿ ದಾಖಲೆಗಳು ಇದ್ದರೆ ಅದನ್ನು ತಾಲೂಕು ತಹಸೀಲ್ದಾರ್  ಅವರಿಗೆ ಸಲ್ಲಿಸಿದರೆ  ನಿಮಗೂ ಕೂಡ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಆಗ, ಈ ಭೂಮಿ ವ್ಯಾಪ್ತಿಯಲ್ಲಿ ಯಾರು ಉಳುಮೆ ಮಾಡದೆ ಇರುವಂತಹ ಬೇರೆ ಬೇರೆ ಗ್ರಾಮಗಳ ಬೇರೆ ಬೇರೆ ಭಾಗದ ರೈತರುಗಳು ಪರಿಹಾರ ಪಡೆದುಕೊಳ್ಳುತ್ತಿದ್ದಾರೆ . ಕೂಡಲೇ ಮುಖ್ಯಮಂತ್ರಿಗಳು ,  ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಲೋಪ ಸರಿಪಡಿಸುವಂತೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು .

key words: ‘Land compensation’, farmers, tilling, gomaala, Dr Yatindra Siddaramaiah

‘Land compensation’ if farmers tilling in government gomaala submit documents: Dr Yatindra Siddaramaiah

The post ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರು ದಾಖಲೆ ಸಲ್ಲಿಸಿದರೆ “ ಭೂ ಪರಿಹಾರ “: ಡಾ.ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರೇಣುಕಾಸ್ವಾಮಿ ಕೊಲೆ ಕೇಸ್: ಸತ್ಯಸಂಗತಿ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಒಪ್ಪಿಕೊಂಡ ಆರೋಪಿ

ಬೆಂಗಳೂರು,ಆಗಸ್ಟ್.20,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯವಾದ ಸಂಗತಿಯನ್ನ...

ലണ്ടനിൽ മുസ്‌ലിം ആക്ടിവിസ്റ്റിനെ നിരീക്ഷിക്കാൻ യു.എ.ഇ ഇസ്രഈലി പൗരന് ദശലക്ഷങ്ങൾ നൽകിയിരുന്നതായി റിപ്പോർട്ട്

ലണ്ടൻ: ബ്രിട്ടിഷ് മുസ്‌ലിം ആക്ടിവിസ്റ്റ് അനസ് അൽറ്റിക്രിറ്റിയെ നിരീക്ഷിക്കാൻ യു.എ.ഇ ദശലക്ഷക്കണക്കിന്...

"அமெரிக்காவின் கடன் நெருக்கடியை திசை திருப்பவே எங்கள் மீது பொருளாதார D-Day" – ஈரானின் ரியாக்‌ஷன்

ஈரானுக்குப் பொருளாதார ரீதியாக நெருக்கடி கொடுக்க நேற்று (ஆகஸ்ட் 19), ஈரானுக்கு...

Holiday Changed: మిలాద్ ఉన్ నబీ సెలవు తేదీ మార్పు.. ఉత్తర్వులు జారీ చేసిన ప్రభుత్వం..

ఆంధ్రప్రదేశ్ ప్రభుత్వం మిలాద్‌-ఉన్‌-నబి పండుగ సాధారణ సెలవు తేదీని సవరిస్తూ కీలక...