18
May, 2025

A News 365Times Venture

18
Sunday
May, 2025

A News 365Times Venture

ಎಟಿಎಂಗೆ ಹಣ ತುಂಬದೆ‌ ತೆಗೆದುಕೊಂಡ ಹೋದ ಆರೋಪ : ಇಬ್ಬರ ವಿರುದ್ದ FIR ದಾಖಲು

Date:

ಮೈಸೂರು,ಜನವರಿ,18,2025 (www.justkannada.in): ಎಟಿಎಂಗೆ ಹಣ ತುಂಬದೆ‌ ತೆಗೆದುಕೊಂಡ ಹೋದ ಆರೋಪದ ಮೇಲೆ ಇಬ್ಬರ ವಿರುದ್ದ ಮೈಸೂರು ಜಿಲ್ಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.  ಟಿ ಎಲ್ ಎಂಟರ್‌ಪ್ರೈಸಸ್ ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿತ್ತು. ಈ  ಟಿ ಎಲ್ ಎಂಟರ್ ಪ್ರೈಸಸ್‌ ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದರು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣ‌ ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡುತ್ತಿದ್ದನು.

ಈ ಮಧ್ಯೆ ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದೆ.  ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದ್ದು ಈ ವೇಳೆ ಆಕ್ಷಯ್ ಎಟಿಎಂ ಹಣ ಹಾಕದೆ ಬ್ಯಾಗ್‌ ನಲ್ಲಿ ತುಂಬಿಕೊಂಡು  ಹೋದ ದೃಶ್ಯ ಸೆರೆಯಾಗಿದೆ.

ಅಕ್ಷಯ್ ಗದ್ದಿಗೆ ಗ್ರಾಮದ ಎಟಿಎಂ ನಲ್ಲಿ 5 ಲಕ್ಷದ 80 ಸಾವಿರ ಹಣ ಲೋಡ್ ಮಾಡಿಲ್ಲ. ಈ ಕೃತ್ಯಕ್ಕೆ ಆಕೆಯ ಪರಿಚಯದ ತೇಜಸ್ವಿನಿ‌ ಎಂಬಾಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು,  ಇಬ್ಬರು ಈ ಹಣದಿಂದ ಚಿನ್ನ ಖರೀದಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದುಈ ಹಿನ್ನೆಲೆ ಇದೀಗ ಇಬ್ಬರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

Key words: FIR , money, ATM, without, filling, Mysore

The post ಎಟಿಎಂಗೆ ಹಣ ತುಂಬದೆ‌ ತೆಗೆದುಕೊಂಡ ಹೋದ ಆರೋಪ : ಇಬ್ಬರ ವಿರುದ್ದ FIR ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೊತ್ತೂರು ಮಂಜುನಾಥ್ ಪಕ್ಕ ದೇಶಾಭಿಮಾನಿ: ಸೈನಿಕರಿಗೆ ಕಾಂಗ್ರೆಸ್ ಅಪಮಾನ ಮಾಡುವ ಪ್ರಶ್ನೆಯೇ ಇಲ್ಲ- ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮೇ,17,2025 (www.justkannada.in): ನಾಲ್ಕೈದು ಫ್ಲೈಟ್ ಹಾರಿಸಿದ್ದು ಬಿಟ್ಟರೇ ಏನು ಮಾಡಿಲ್ಲ...

ലഷ്‌കര്‍ ബന്ധമുള്ള രണ്ട് പേരെ വൈറ്റ് ഹൗസ് ഉപദേശകസമിതിയില്‍ ഉള്‍പ്പെടുത്തി ട്രംപ്

വാഷിങ്ടണ്‍: ഭീകരസംഘടനകളായ അല്‍ ഖ്വയ്ദയുമായും ലഷ്‌കര്‍ ഇ ത്വയ്ബയുമായുമായി ബന്ധമുള്ള രണ്ട്...

கரூர்: அஜித் பட கிராமம்போல ஒதுக்கப்படுகிறோம்; அடிப்படை வசதி கேட்டு 18 நாட்களாக போராடும் மக்கள்

கரூர் மாவட்டம், குளித்தலை சட்டமன்றத் தொகுதியில் வரும், கிருஷ்ணராயபுரம் ஊராட்சி ஒன்றியத்துக்கு...

PSLV-C61: ఇస్రో రాకెట్ వైఫల్యానికి కారణం ఇదేనా..?

PSLV-C61: భారత అంతరిక్ష పరిశోధన సంస్థ(ఇస్రో) అత్యంత ప్రతిష్టాత్మకంగా భావించిన అధునాతన...