28
May, 2026

A News 365Times Venture

28
Thursday
May, 2026

A News 365Times Venture

ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’

Date:

ಮೈಸೂರು,ಮೇ,26,2026 (www.justkannada.in): ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ಭರತನಾಟ್ಯಂ ರಂಗಪ್ರವೇಶ ಕಾರ್ಯಕ್ರಮವನ್ನ ಮೈಸೂರಿನಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 5.20ಕ್ಕೆ ನಗರದ ಜಗನ್ನಾಥ ಸೆಂಟರ್ ಫಾರ್ ಅರ್ಟ್ ಅಂಡ್ ಕಲ್ಚರ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ,  ಮೈಸೂರು ಅರಮನೆ ಮಂಡಳಿ  ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯ, ಕಲಾಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಸಂದೇಶ್ ಭಾರ್ಗವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗುರು ವಿದುಷಿ ಮಿತ್ರಾ ನವೀನ್ ಮತ್ತು ಎಂ.ಎಸ್ ನವೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಮೈಸೂರಿನಲ್ಲಿ ಬೆಳೆದ ದೀಕ್ಷಿತಾ ವೇಣುಗೋಪಾಲ್, ಭರತನಾಟ್ಯದ ಮಾರ್ಗವನ್ನು ಶಿಸ್ತು, ಸೌಂದರ್ಯ ಮತ್ತು ಆಳವಾದ ಭಕ್ತಿಯಿಂದ ಅನುಸರಿಸುತ್ತಿದ್ದಾರೆ. ಹತ್ತನೇ ವಯಸ್ಸಿನಲ್ಲಿ ಗುರು ವಿದುಷಿ ಮಿತ್ರಾ ನವೀನ್ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಆರಂಭಿಸಿದ ಅವರು, ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡಾನ್ಸ್‌ ನಲ್ಲಿ ವಿದ್ವಾನ್ ಎಂ.ಎಸ್. ನವೀನ್ ಅವರಿಂದ ಕರ್ಣಾಟಕ ಸಂಗೀತದ ತರಬೇತಿಯನ್ನು ಸಹ ಪಡೆದಿದ್ದಾರೆ.

Key words: Dikshitha Venugopal, ‘Bharatanatyam Rangapravesha, Mysore

The post ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഏകീകൃത സിവില്‍ കോഡ് പാസാക്കുന്ന മൂന്നാം സംസ്ഥാനമായി അസം; വടക്കുകിഴക്കന്‍ ഇന്ത്യയില്‍ ആദ്യം

ദിസ്പൂര്‍: ഏകീകൃത സിവില്‍ കോഡ് ബില്‍ പാസാക്കി അസം. അഞ്ച് മണിക്കൂര്‍...

'பாட்டிலுக்கு 10 ரூபாய்…' – ஒரு டாஸ்மாக் ஊழியரின் லஞ்ச கதை!

`பாட்டிலுக்கு 10 ரூபாய்...' என தேர்தல் பிரசாரத்தின் போது கரூரில் விஜய்...

US-Iran: తూచ్.. హార్ముజ్‌పై ఎలాంటి ఒప్పందం జరగలేదు.. వైట్‌హౌస్ ఖండన

హార్ముజ్ జలసంధి విషయంలో అమెరికా-ఇరాన్ మధ్య ముసాయిదా ఒప్పందం కుదిరిందంటూ ఇరాన్...

ರಾಜ್ಯ ಸರ್ಕಾರದ  ವೈಫಲ್ಯ ಒಪ್ಪಿ ಸಿಎಂ ಬದಲಾವಣೆಗೆ ನಿರ್ಧಾರ ಮಾಡಿದೆ- ಬಿವೈ ವಿಜಯೇಂದ್ರ

ಶಿವಮೊಗ್ಗ,ಮೇ,27,2026 (www.justkannada.in):  ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿ...