30
June, 2026

A News 365Times Venture

30
Tuesday
June, 2026

A News 365Times Venture

BSY ಅಭಿಮಾನೋತ್ಸವ: ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಅಮಿತ್ ಶಾ

Date:

ಚಿತ್ರದುರ್ಗ,ಮೇ,9,2026 (www.justkannada.in): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಬಿಎಸ್ ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಾಲ್ಗೊಂಡು ಚಾಲನೆ ನೀಡಿದರು.

ಸಮಾರಂಭದಲ್ಲಿ ಯಡಿಯೂರಪ್ಪ ಕುರಿತು ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕೇಂದ್ರ ಸಚಿವ ಅಮಿತ್‌ ಶಾ ಅವರು  ಬಿಎಸ್‌ ಯಡಿಯೂರಪ್ಪಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅಮಿತ್ ಶಾ, ರೈತನಾಯಕ  ಬಿಎಸ್ ವೈ ಅವರನ್ನು ಅಭಿನಂದಿಸಲು ಬಂದಿದ್ದೇನೆ. ಬಿಎಸ್ ವೈ ಅವರ 50 ವರ್ಷ ಸಾರ್ವಜನಿಕ ಬಿಜೆಪಿ ಸೇವೆಯನ್ನು ಸಂಭ್ರಮಿಸುತ್ತಿದ್ದೇವೆ. ಬಿಎಸ್ ವೈ ತಮ್ಮದೇ ಹಾದಿ ಸೃಷ್ಟಿಸಿ ಬೇರೆಯವರಿಗೆ ದಾರಿ ತೋರಿಸಿದವರು.  ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಬಿಎಸ್ ವೈ ಈ ಹಂತಕ್ಕೆ ಬಂದಿದ್ದಾರೆ. ಬೆಂಗಳೂರನ್ನ ಜಾಗತಿಕ ಹಬ್ ಮಾಡಿದವರು.  ಬಿಎಸ್ ವೈ 50 ವರ್ಷಗಳ ಕಾಲ ಕರ್ನಾಟಕ ದೇಶದ ಸೇವೆ ಮಾಡಿದ್ದಾರೆ. ದೇಶದಲ್ಲೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೊದಲ ಸಿಎಂ ಬಿಎಸ್ ವೈ. ಈ ಮೂಲಕ ದೇಶಕ್ಎ ಮಾದರಿಯಾಗಿದ್ದಾರೆ ಎಂದು ಹಾಡಿಹೊಗಳಿದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ, ಸುತ್ತೂರು ಮಠ ಸ್ವಾಮೀಜಿ, ನಿರಂಜನಾಪುರಿ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಮಹಾ ಸ್ವಾಮೀಜಿ, ಮುರುಗರಾಜೇಂದ್ರ ಸ್ವಾಮೀಜಿ,  ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಂಸದ ಪ್ರಭಾಕರ್ ಕೋರೆ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

Key words: BSY Abhimanotsav, Union Minister, Amit Shah, praises, Yediyurappa

The post BSY ಅಭಿಮಾನೋತ್ಸವ: ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಅಮಿತ್ ಶಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Salman Nadwi D*eath: అయోధ్య వివాదంపై చర్చలకు మద్దతిచ్చిన మౌలానా సల్మాన్ నద్వీ మృతి..

Salman Nadwi D*eath: ప్రముఖ ఇస్లామిక్ పండితుడు, అయోధ్య రామజన్మభూమి–బాబ్రీ మసీదు...

ഭരണഘടനയെ ചോദ്യം ചെയ്യുന്നവര്‍ യഥാര്‍ത്ഥ ജെന്‍ സികളല്ല: നിതിന്‍ നബിന്‍

ഹൈദരാബാദ്: രാജ്യത്തിന്റെ ഭരണഘടനയേയും സംസ്‌കാരത്തേയും ചോദ്യം ചെയ്യുന്നവര്‍ യഥാര്‍ത്ഥ ജെന്‍ സികളല്ലെന്ന്...

"இடைத்தேர்தலில் ஸ்​டா​லின் நிற்பதற்​கு மறுப்பு தெரிவிக்க விரும்பவில்லை" – மு.வீரபாண்டியன் | Live Updates

ஸ்டாலின் பேச்சுக்கு மு.வீரபாண்டியன் பதில்நேற்று முன்தினம் (ஜூன் 28, 2026) திமுக...