ಗದಗ,ಫೆಬ್ರವರಿ,13,2026 (www.justkannada.in): ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 1 ಸಾವಿರ ದಿನಗಳನ್ನು ಪೂರೈಸಿದ್ದು ಈ ಹಿನ್ನೆಲೆಯಲ್ಲಿ ನಾಳೆ ಹಾವೇರಿಯಲ್ಲಿ ಸಾವಿರ ದಿನಗಳ ಸಾರ್ಥಕ ಕೆಲಸವನ್ನು ಸಮರ್ಪಣೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಜನರ ಅನಿಶ್ಚಿತತೆ ಕಳೆದು, ಅವರ ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ನಾವು ಮಾಡಿದ ಕೆಲಸಗಳ ವರದಿಯನ್ನು ಜನರಿಗೆ ವರದಿ ಒಪ್ಪಿಸುವುದು ಕೂಡ ಪ್ರಜಾಪ್ರಭುತ್ವದ ಭಾಗ. ಇದೊಂದು ಮೌನಕ್ರಾಂತಿ. ಅದನ್ನು ಸಂಭ್ರಮಿಸುವ ದಿನ ಇದಾಗಿದೆ’ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, ‘ನನಗೆ ಆ ವಿಚಾರದ ಬಗ್ಗೆ ಮಾತನಾಡಲು ಅಪೇಕ್ಷೆ ಇಲ್ಲ. ಯಾವಕಾಲಕ್ಕೆ ಏನು ಆಗಬೇಕೋ ಕಾಲವೇ ಉತ್ತರಿಸುತ್ತೆ. ಇದರಿಂದ ಸಾರ್ವಜನಿಕ ಹಿತ ಕಾಯುವ ಕೆಲಸ ಆಗಲ್ಲ. ವರಿಷ್ಠರು ನನ್ನ ಕೇಳಿದ್ರೆ 4 ಗೋಡೆಗಳ ಮಧ್ಯೆ ಹೇಳುತ್ತೇನೆ ಎಂದರು.
Key words: 1,000 days, congress government, Minister, Krishna Bhairegowda
The post ಸರ್ಕಾರಕ್ಕೆ 1 ಸಾವಿರ ದಿನ: ನಾಳೆ ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ- ಸಚಿವ ಕೃಷ್ಣಭೈರೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





