18
March, 2026

A News 365Times Venture

18
Wednesday
March, 2026

A News 365Times Venture

ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ: ಭಯೋತ್ಪಾದನೆ ಮಣ್ಣು ಮಾಡುತ್ತೇವೆ- ಪ್ರಧಾನಿ ಮೋದಿ

Date:

ಬಿಕಾನೇರ್,ಮೇ,22,2025 (www.justkannada.in): ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು  ಹೆದರಲ್ಲ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಣ್ಣು ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಇಂದು ರಾಜಸ್ತಾನದ ಬಿಕಾನೇರ್ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ ಭಾರತೀಯ ಸೇನೆಯನ್ನ ಶ್ಲಾಘಿಸಿದರು.

ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ, ಏಪ್ರಿಲ್ 22 ರಂದು ಪಹಲ್ಗಾಮ್  ನಲ್ಲಿ ಉಗ್ರರು ದಾಳಿ ಮಾಡಿ 26 ಮಂದಿ ಅಮಾಯಕರನ್ನ ಕೊಂದಿದ್ದರು. ಇದಾದ ಬೆನ್ನಲ್ಲೆ ಕೇವಲ 22 ನಿಮಿಷದಲ್ಲಿ ಉಗ್ರರನ್ನ ಮಣ್ಣಿನಲ್ಲಿ ಹೂತು ಹಾಕಿದ್ದೇವೆ. ಭಯೋತ್ಪಾದನೆಯನ್ನ ಮಣ್ಣು ಮಾಡುತ್ತೇವೆ. ಸೇನೆಗೆ ಪೂರ್ಣ ಸ್ವಾತಂತ್ರ ನೀಡಿದ್ದೇವೆ .  ಪಾಕ್  ಗೆ ತಕ್ಕ ಉತ್ತರ ನೀಡಿದ್ದೇವೆ  ಪ್ರತಿ ಹನಿಯ ರಕ್ತಕ್ಕೂ ಸೇನೆ ಪ್ರತಿಕಾರ ತೀರಿಸಿಕೊಂಡಿದೆ ಎಂದರು.

ದರ್ಮ ಕೇಳಿ ಉಗ್ರರು ಹೊಡೆದಿದ್ದಾರೆ  22ನಿಮಿಷದಲ್ಲಿ 9 ಉಗ್ರರ ನೆಲೆಗಳನ್ನ ನೆಲಸಮ ಮಾಡಿದ್ದಾರೆ.  ಭಾರತೀಯ ಸೇನೆಯು  ಪಾಕ್ ಮಂಡಿಯೂರಿವಂತೆ ಮಾಡಿದೆ. ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ ಭಾರತದ ವಿರುದ್ದ ಪಾಕ್ ಯುದ್ದ ಗೆದ್ದಿಲ್ಲ ಎಂದು ಮೋದಿ ನುಡಿದರು.

Key words: PM Modi, visit, Bikaner airbase, Rajasthan

The post ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ: ಭಯೋತ್ಪಾದನೆ ಮಣ್ಣು ಮಾಡುತ್ತೇವೆ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯಗೆ 16 ಶಾಸಕರಿಂದ ಮನವಿ

ಬೆಂಗಳೂರು,ಮಾರ್ಚ್,17,2026 (www.justkannada.in):  ಸಚಿವ ಸಂಪುಟ ಪುನಾರಚನೆ ವೇಳೆ ನಮಗೂ ಅವಕಾಶ...

ദത്തെടുത്ത അമ്മമാരുടെ പ്രസവാവധി; കുട്ടിയുടെ പ്രായം പരിഗണിക്കേണ്ടതില്ലെന്ന് സുപ്രീം കോടതി

ന്യൂദൽഹി: ദത്തെടുത്ത അമ്മമാരുടെ പ്രസവാവധിക്ക് കുട്ടിയുടെ പ്രായം പരിഗണിക്കേണ്ടതില്ലെന്ന് സുപ്രീം കോടതി....

Iftar Dinner: నేడు ముస్లిం సోదరులకు వైసీపీ ఇఫ్తార్ విందు.. పాల్గొననున్న మాజీ సీఎం వైఎస్ జగన్!

పవిత్ర రంజాన్‌ మాసాన్ని పురస్కరించుకుని ముస్లిం సోదరులకు బుధవారం వైఎస్సార్‌సీపీ ఇఫ్తార్‌...