16
March, 2026

A News 365Times Venture

16
Monday
March, 2026

A News 365Times Venture

MYSORE PALACE BOARD: ಜಾತಿ ನಿಂಧನೆ ಪ್ರಕರಣ,  ಹೈಕೋರ್ಟ್ ತಡೆಯಾಜ್ಞೆ

Date:

 

ಮೈಸೂರು, ಮಾ.೦೩,೨೦೨೫: ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ವಿರುದ್ಧ ದಾಖಲಾಗಿದ್ದ ಜಾತಿ ನಿಂಧನೆ ದೂರು ಪ್ರಕರಣಕ್ಕೆ ರಾಜ್ಯ ಹೈಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್‌ ನ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರಿದ್ದ ಏಕಪೀಠ ಸೋಮವಾರ ಈ ತಡೆಯಾಜ್ಞೆ ನೀಡಿದೆ. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ಪರವಾಗಿ ಸಿಬಿಐ ವಕೀಲ ಪ್ರಸನ್ನ ಕುಮಾರ್‌ ಹಾಜರಾಗಿದ್ದರು.

ಜಿಲ್ಲಾ ಸಿವಿಲ್‌ ನ್ಯಾಯಾಲಯದಲ್ಲಿ ಈಗಾಗಲೇ, ಅರಮನೆ ಮಂಡಳಿಗೆ ಸಂಬಂಧಿಸಿದಂತೆ ಯಾವುದೇ  ಸುದ್ಧಿ ಅಥವಾ ವರದಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ. ಆದಾಗ್ಯೂ, ಸ್ಥಳೀಯ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮನ್‌ ಅರಮನೆ ಮಂಡಳಿಗೆ ಅತಿಕ್ರಮ ಪ್ರವೇಶಿಸಿದ್ದರು. ಕೋರ್ಟ್‌ ನಿರ್ಬಂಧಕಾಜ್ಞೆ ಇರುವ ಬಗ್ಗೆ ಹೇಳಿದರು ಅದನ್ನು ಉಲ್ಲಂಘಿಸಿದಂತೆ ವರ್ತಿಸಿದರು. ಆ ಮೂಲಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು.  ಬಳಿಕ ತಾವೇ ಪೊಲೀಸ್‌ ಠಾಣೆಗೆ ತೆರಳಿ ಸುಳ್ಳು ಜಾತಿ ನಿಂಧನೆ ಪ್ರಕರಣ ದಾಖಲಿಸಿದರು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರ ಪರ ವಕೀಲರು ಕೋರ್ಟ್‌ ಗೆ ಮಾಹಿತಿ ನೀಡಿದರು.

ಈ ಘಟನೆ ಬಳಿಕ  ಅರಮನೆ ಮಂಡಳಿ ಸಿಬ್ಬಂದಿ, ದೇವರಾಜ ಠಾಣೆ ಪೊಲೀಸ್‌ ಠಾಣೆಗೆ ತೆರಳಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ವರದಿಗಾರ ಕೆಂಡಗಣ್ಣ ಹಾಗೂ ಕ್ಯಾಮೆರಾಮನ್‌ ರವಿ ಅವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದನ್ನು ವಕೀಲ ಪ್ರಸನ್ನ ಕುಮಾರ್‌  ಕೋರ್ಟ್‌ ಗೆ ವಿವರಿಸಿದರು.

ಆ ಪದ ಬಳಕೆಯೇ ಗೊತ್ತಿಲ್ಲ:

“ಜಾತಿ ನಿಂಧನೆ” ಪ್ರಕರಣದ ದೂರು ಎದುರಿಸುತ್ತಿದ್ದ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಜಸ್ಟ್‌ ಕನ್ನಡ ಜತೆ ಮಾತನಾಡಿ, ನನಗೆ ಅ ಪದ ಬಳಕೆಯೇ ಗೊತ್ತಿಲ್ಲ. ನನ್ನ ವಿರುದ್ಧ ಎಫ್.ಐ.ಆರ್.‌ ಮಾಡಿಸಲೇ ಬೇಕು ಎಂಬ ಸಲುವಾಗಿ ಸುಳ್ಳು ದೂರು ನೀಡಿದರು. ಈ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೀಗ ಹೈಕೋರ್ಟ್‌ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವುದು ಸಮಧಾನ ತಂದಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

KEY WORDS: The Karnataka High Court, atrocity complaint, Mysore Palace Board, Deputy Director T S Subramanya.

The Karnataka High Court on Monday stayed atrocity complaint filed against Mysore Palace Board Deputy Director T S Subramanya.

 

 

The post MYSORE PALACE BOARD: ಜಾತಿ ನಿಂಧನೆ ಪ್ರಕರಣ,  ಹೈಕೋರ್ಟ್ ತಡೆಯಾಜ್ಞೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കണ്ണൂരില്‍ മത്സരിക്കണമെന്ന് പറഞ്ഞ് കെ. സുധാകരന്‍ കരയുന്നു; ജി. സുധാകരന്റേത് ഒരു വിഷയമേ അല്ല: എം.വി ഗോവിന്ദന്‍

തിരുവനന്തപുരം: കോണ്‍ഗ്രസില്‍ പടല പിണക്കങ്ങളാണെന്ന ആരോപണവുമായി സി.പി.ഐ.എം സംസ്ഥാന സെക്രട്ടറി എം....

கூட்டணிக்கு தனி ரூட் பிடித்த ஆனந்த்; கடுப்பான விஜய்! தவெக – NDA கூட்டணி(?) நிலவரம் என்ன?

தவெக - NDA இடையே தீவிரமாக கூட்டணி பேச்சுவார்த்தை நடந்து வருவதாக...

Metpally: హనుమాన్ మాలలో ఉన్న విద్యార్థులకు ప్రవేశం నిరాకరణ.. స్కూల్ వద్ద ఉద్రిక్తత..!

Metpally: జగిత్యాల జిల్లాలోని మెట్ పల్లి పట్టణంలో ఉద్రిక్త పరిస్థితులు నెలకొన్నాయి....

ഹോളിക്കിടെ സംഘര്‍ഷം, ഹിന്ദു യുവാവിന്റെ മരണം; ദല്‍ഹിയില്‍ 70 കടകള്‍ ഇടിച്ചുനിരത്തി

  ന്യൂദല്‍ഹി: ഹോളി ആഘോഷത്തിനിടെയുണ്ടായ സംഘര്‍ഷത്തില്‍ ഹിന്ദു യുവാവ് കൊല്ലപ്പെട്ട സംഭവത്തില്‍...