9
April, 2026

A News 365Times Venture

9
Thursday
April, 2026

A News 365Times Venture

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂಧನ

Date:

ಬೆಂಗಳೂರು,ಏಪ್ರಿಲ್,8,2026 (www.justkannada.in): 42ನೇ ಎಸಿಜೆಎಂ  ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರ ನಗರ ಠಾಣಾ ಪೊಲೀಸರು  ವಾಟಾಳ್​ ನಾಗರಾಜ್​ ಅವರನ್ನು ಬಂಧಿಸಿದ್ದಾರೆ. 2021 ರಲ್ಲಿ ವಾಟಾಳ್ ನಾಗರಾಜ್ ಅವರು  ಶಾಸಕ ಸುರೇಶ್ ಕುಮಾರ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  42ನೇ ಎಸಿಜೆಎಂ ನ್ಯಾಯಾಲಯ  ವಾಟಾಳ್​ ನಾಗರಾಜ್​ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು.

ಬಂಧನದ ವೇಳೆ  ವಾಟಾಳ್​ ನಾಗರಾಜ್​ ಅವರು ಇಂಗ್ಲಿಷ್‌ ನಲ್ಲಿ ವಾರೆಂಟ್ ತಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕನ್ನಡದಲ್ಲಿ ವಾರೆಂಟ್ ಕೊಟ್ಟರೆ ಮಾತ್ರ ಬರುತ್ತೇನೆ ಇಲ್ಲದಿದ್ದರೆ ಬರುವುದಿಲ್ಲ ಎಂದು ಪಟ್ಟು ಹಿಡಿದು  ಪೊಲೀಸ್ ವಾಹನ ಹತ್ತಲು ನಿರಾಕರಿಸಿದರು. ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಆಟೋದಲ್ಲಿ ಕೋರ್ಟ್‌ಗೆ ಕರೆದುದೊಯ್ದರು.

Key words: Kannada activist, Vatal Nagaraj, arrested

The post ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഹോര്‍മുസില്‍ ടോള്‍ പിരിക്കാന്‍ ഇറാനുമായി സംയുക്ത സംരംഭത്തിന് ആലോചന; സൈനിക നിയന്ത്രണത്തിനുള്ള തന്ത്രം മെനഞ്ഞ് ട്രംപ്

വാഷിങ്ടണ്‍: ലോകത്ത് വിതരണം ചെയ്യുന്ന ഊര്‍ജത്തിന്റെ 20 ശതമാനവും കടന്നുപോകുന്ന  ഇറാന്റെ...

All Set for Voting: 3 రాష్ట్రాల్లో పోలింగ్ కు సర్వం సిద్ధం..!

దేశవ్యాప్తంగా రాజకీయ వేడి పెంచుతున్న కేరళ, అస్సాం , కేంద్రపాలిత ప్రాంతమైన...

ನಾಳೆ ಮಧ್ಯಾಹ್ನ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು,ಏಪ್ರಿಲ್,8,2026 (www.justkannada.in): ನಾಳೆ  ಮಧ್ಯಾಹ್ನ 3 ಗಂಟೆಗೆ  ದ್ವಿತೀಯ ಪಿಯುಸಿ...