10
April, 2026

A News 365Times Venture

10
Friday
April, 2026

A News 365Times Venture

ಪಾಲಿಕೆಯಿಂದ ನೀರಿನ ಸಂಪರ್ಕ ಶುಲ್ಕ ಏರಿಕೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ- ಮಾಜಿ ಮೇಯರ್ ಶಿವಕುಮಾರ್

Date:

ಮೈಸೂರು, ಏಪ್ರಿಲ್,4,2026 (www.justkannada.in): ಮೈಸೂರು ಮಹಾನಗರ ಪಾಲಿಕೆ ಇತ್ತೀಚೆಗೆ ನೀರಿನ ಸಂಪರ್ಕ ಶುಲ್ಕವನ್ನು ಶೇ.30 ಹಾಗೂ ಒಳಚರಂಡಿ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಏಪ್ರಿಲ್ 1ರಿಂದಲೇ ಜಾರಿಗೆ ತಂದಿರುವ ಈ ದರ ಏರಿಕೆ, ಈಗಾಗಲೇ ಬೆಲೆ ಏರಿಕೆಯಿಂದ ನಲುಗಿರುವ ಜನರಿಗೆ ಹೆಚ್ಚುವರಿ ಹೊರೆ ಆಗಿದೆ ಎಂದು ಟೀಕೆಗಳು ಕೇಳಿಬಂದಿವೆ  ಎಂದು ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಶಿವಕುಮಾರ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು, ಕರ್ನಾಟಕ ನಗರಾಭಿವೃದ್ಧಿ ಅಧಿನಿಯಮದ ಅನ್ವಯ ಪ್ರತಿ ಮೂರು ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಸಾಧ್ಯವಾಗಿದ್ದು, 14 ವರ್ಷಗಳ ನಂತರ ಈ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಭೀತಿ ಎದುರಾಗಿರುವ ಸಂದರ್ಭದಲ್ಲಿ, ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಬೆಲೆ ಎರಡೂ ಜನರನ್ನು ಕಂಗೆಡಿಸುತ್ತಿವೆ. ರಾಜ್ಯದಲ್ಲಿಯೂ ವಿದ್ಯುತ್, ಹಾಲು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ದರ ಏರಿಕೆಯ ಪರಿಣಾಮ ಜನಜೀವನ ದುಸ್ತರವಾಗಿದೆ ಎಂದು ಟೀಕಿಸಿದರು.

ಈ ನಡುವೆ, ಮಹಾನಗರ ಪಾಲಿಕೆಯು ನೀರಿನ ಕನಿಷ್ಠ ಮಾಸಿಕ ದರವನ್ನು ₹125ರಿಂದ ₹163ಕ್ಕೆ ಹೆಚ್ಚಿಸಿದೆ. ಜೊತೆಗೆ, ವಿವಿಧ ಬಳಕೆ ಸ್ಲ್ಯಾಬ್‌ ಗಳಲ್ಲೂ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮನೆಮಂದಿಗೆ ಮಾಸಿಕ ವೆಚ್ಚ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎಂದರು.

ಡಿಸಿಬಿ (Demand–Collection–Balance) ಶ್ವೇತ ಪತ್ರಕ್ಕೆ ಆಗ್ರಹ

ನೀರಿನ ತೆರಿಗೆ ದರಗಳನ್ನು ಏರಿಸುವ ಮೊದಲು, ಪಾಲಿಕೆ ನಗರದಲ್ಲಿನ ನೀರಿನ ತೆರಿಗೆಗೆ ಸಂಬಂಧಿಸಿದ ಡಿಮಾಂಡ್ (ಬೇಡಿಕೆ), ಕಲೆಕ್ಷನ್ (ಸಂಗ್ರಹ), ಬ್ಯಾಲೆನ್ಸ್ (ಬಾಕಿ) ವಿವರಗಳ ಸಮಗ್ರ ವರದಿ ಹೊಂದಿದ ಡಿಸಿಬಿ ಶ್ವೇತ ಪತ್ರವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಇದರಿಂದ ತೆರಿಗೆ ಸಂಗ್ರಹದ ಪಾರದರ್ಶಕತೆ ಮತ್ತು ಹಣಕಾಸು ಸ್ಥಿತಿ ಸ್ಪಷ್ಟವಾಗಲಿದೆ ಎಂದು ಅಭಿಪ್ರಾಯಿಸಲಾಗಿದೆ. ಒಟ್ಟಿನಲ್ಲಿ, ಇಂತಹ ಸಂಕಷ್ಟದ ಸಮಯದಲ್ಲಿ ಪಾಲಿಕೆಯ ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

Mysuru Water Tariff Hike Draws Criticism

Mysuru City Corporation has increased water connection charges by 30% and sewerage charges by 10%, effective April 1, triggering public backlash amid rising living costs.

The minimum monthly tariff has been raised from ₹125 to ₹163, with higher rates across usage slabs. While officials say the revision comes after 14 years as per rules, critics argue it adds burden during inflation and global uncertainties.

DCB White Paper Demand

There are calls for a DCB (Demand–Collection–Balance) white paper, urging the corporation to disclose complete data on water tax demand, collection, and arrears to ensure transparency.

Key words: Water connection, fee, hike, Mysore, Former Mayo Shivakumar

The post ಪಾಲಿಕೆಯಿಂದ ನೀರಿನ ಸಂಪರ್ಕ ಶುಲ್ಕ ಏರಿಕೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ- ಮಾಜಿ ಮೇಯರ್ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರು,ಏಪ್ರಿಲ್,10,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಕುಂಭದ್ರೋಣ ಪರ್ವತದ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ...

ലീഗിന് ഉപമുഖ്യമന്ത്രി സ്ഥാനത്തിന് അര്‍ഹതയുണ്ട്; ഇപ്പോള്‍ അവകാശവാദമുന്നയിക്കില്ല: മുനവ്വറലി ശിഹാബ് തങ്ങള്‍

മലപ്പുറം: ഉപമുഖ്യമന്ത്രി സ്ഥാനത്തിന് മുസ്‌ലിം ലീഗിന് അര്‍ഹതയുണ്ടെന്ന് യൂത്ത് ലീഗ് സംസ്ഥാന...

சமாதானப் பேச்சுவார்த்தைக்குத் திரும்பிய ஈரான்: சீனா – பாகிஸ்தான் கூட்டணி சாதித்தது என்ன?

கடந்த 38 நாள்களாக ஈரான் மற்றும் அமெரிக்கா இடையே மிகக் கடுமையான...