ಮಂಡ್ಯ,ಏಪ್ರಿಲ್,3,2026 (www.justkannada.in): ಸಿದ್ದರಾಮಯ್ಯ 2013ರಲ್ಲಿ ಇದೇ ನನ್ನ ಕೊನೇ ಚುನಾವಣೆ ಎಂದಿದ್ದರು. ಅಧಿಕಾರದ ರುಚಿ ನೋಡಿದ್ಮೇಲೆ ಈಗ ‘ಪರ್ಮನೆಂಟ್ ಸಿಎಂ’ ಅಂತಿದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲೆ ಟಿ.ಎಸ್ ಛತ್ರದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವ ವಿಚಾರ ಚುನಾವಣೆವರೆಗೂ ಕಾದು ನೋಡಬೇಕು ಸಿದ್ದರಾಮಯ್ಯ 2028ಕ್ಕೂ ನಾನೇ ಸಿಎಂ ಅನ್ನುತ್ತಿದ್ದಾರೆ. ಕೊನೇ ಉಸಿರಿರೊವರೆಗೂ ರಾಜಕೀಯ ಮಾಡುತ್ತೇನೆ ಎಂದಿದ್ದಾರೆ. 2013ರಲ್ಲಿ ಇದೇ ನನ್ನ ಕೊನೇ ಚುನಾವಣೆ ಎಂದಿದ್ದರು ಅಧಿಕಾರದ ರುಚಿ ನೋಡಿದ ಮೇಲೆ ಪರ್ಮನೆಂಟ್ ಸಿಎಂ ಎಂದಿದ್ದಾರೆ. ಈ ಬಗ್ಗೆ ಜನರೇ ಮುಂದೆ ತೀರ್ಮಾನ ಮಾಡುತ್ತಾರೆ ಎಂದರು.
ಕುಟುಂಬ ರಾಜಕಾರಣ ಆರೋಪ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮೊದಲ ಮಗನನ್ನು ಬೆಳೆಸಲು ಓಡಾಡಿದ್ದರು. ಆದರೆ ಮೊದಲ ಮಗನ ಅಕಾಲಿಕ ಮರಣದಿಂದ 2ನೇ ಮಗನನ್ನು ಕರೆತಂದಿದ್ದಾರೆ. ವೈದ್ಯರಾಗಿದ್ದವರನ್ನು ರಾಜಕೀಯಕ್ಕೆ ತಂದಿದ್ದಾರೆ ಡಿಸಿಎಂ ಕುಟುಂಬದಲ್ಲಿ ಎಷ್ಟು ಜನ ಅಧಿಕಾರ ಪಡೆದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಹೋದರರನ್ನು ಕೆಎಂಎಫ್ ಅಧ್ಯಕ್ಷರಾಗಿ ಮಾಡಲು ಮುಂದಾದರು. ಎರಡರಿಂದ ಮೂರು ಜನ ಶಾಸಕರಿರುವ ಕುಟುಂಬ ಸಾಕಷ್ಟಿದೆ ಸಿಎಂಗೆ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಹೆಚ್.ಡಿಕೆ ಟಾಂಗ್ ಕೊಟ್ಟರು.
Key words: Siddaramaiah, permanent CM, Union Minister, HDK
The post ಸಿದ್ದರಾಮಯ್ಯ ಅಧಿಕಾರದ ರುಚಿ ನೋಡಿದ್ಮೇಲೆ ‘ಪರ್ಮನೆಂಟ್ ಸಿಎಂ’ ಅಂತಿದಾರೆ- ಕೇಂದ್ರ ಸಚಿವ HDK ವ್ಯಂಗ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





