22
March, 2026

A News 365Times Venture

22
Sunday
March, 2026

A News 365Times Venture

ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್:  ನಿರ್ಧಾರದಿಂದ ಹಿಂದೆ ಸರಿದ ಮೈಸೂರು ಪಾಲಿಕೆ

Date:

ಮೈಸೂರು,ಮಾರ್ಚ್,21,2026 (www.justkannada.in): ಮೈಸೂರು ಅರಮನೆ ಸಮೀಪದ ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್ ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಕೇಂದ್ರ ಸರ್ಕಾರದ ಸ್ವದೇಶ್ 2.0 ಯೋಜನೆಯಡಿ ಅರಮನೆ ಸನಿಹದ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು. ಟಾಂಗಾ ಸವಾರಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಜನನಿಬಿಡ ಪ್ರದೇಶವಾಗಿರುವ ಅರಮನೆ ಸನಿಹದ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಸಮ್ಮತಿ ಸೂಚಿಸಿತ್ತು.

ಇದರ ಪರಿಣಾಮ ಫುಟ್ ಪಾತ್‌ ನಲ್ಲಿ ಜನರು ಸಂಚರಿಸಲು ಸಾಧ್ಯವಾಗದೆ ರಸ್ತೆಗಿಳಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪಾದಚಾರಿ ರಸ್ತೆಯಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದರು.

ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಕ್ಕಟ್ಟಿಗೆ ಸಿಲುಕಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ‌ಹಾಕಿದ್ದ ಅಡಿಪಾಯ‌ ತೆರವುಗೊಳಿಸಿದ್ದಾರೆ. ಇದೀಗ ಜನರು ಫುಟ್ ಪಾತ್ ನಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ.

Key words: Tong stand, footpath,  Mysore City Corporation, decision

The post ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್:  ನಿರ್ಧಾರದಿಂದ ಹಿಂದೆ ಸರಿದ ಮೈಸೂರು ಪಾಲಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗുരുവായൂരപ്പനില്‍ വിശ്വസിക്കുന്നയാളല്ല, വിളക്ക് കത്തിക്കുന്നത് ഹറാമാണെന്ന് പറയുന്ന എം.എല്‍.എയാണ് ഇവിടെയുള്ളത്: ബി. ഗോപാലകൃഷ്ണന്‍

തൃശൂര്‍: വീണ്ടും വര്‍ഗീയ പരാമര്‍ശവുമായി ബി.ജെ.പി നേതാവും ഗുരുവായൂര്‍ നിയോജക മണ്ഡലത്തിലെ...

'பரப்புரை குழுவில கூட நாட்டாமை பெயர் இல்லை' -பாஜகவுக்கு எதிராக கொந்தளிக்கும் சரத்குமார் ஆதரவாளர்கள்!

இரண்டாண்டுகளுக்கு முன்பு தன்னுடைய சமத்துவ மக்கள் கட்சியை கலைத்துவிட்டு பாஜகவில் இணைந்த...

ಮೊದಲಬಾರಿ ಗೆದ್ದವರಿಗೆ ಅವಕಾಶ ಕೊಡಬೇಕು: ಸಿಎಂ ಸ್ಪಂದಿಸುವ ವಿಶ್ವಾಸವಿದೆ- ಶಾಸಕ ಇಕ್ಬಾಲ್ ಹುಸೇನ್

ರಾಮನಗರ,ಮಾರ್ಚ್,21,2026 (www.justkannada.in):  ಮೊದಲ ಬಾರಿ ಗೆದ್ದವರಿಗೆ ಅವಕಾಶ ಕೊಡಬೇಕು ಸಿಎಂ...