19
March, 2026

A News 365Times Venture

19
Thursday
March, 2026

A News 365Times Venture

ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ

Date:

ಬೆಂಗಳೂರು,ಮಾರ್ಚ್,18,2026 (www.justkannada.in): ಕೆಪಿಎಸ್ ಸಿ ನಡೆಸಿದ ಕೆಎಎಸ್ ನಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು ಈ  ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಸುಧಾರಣೆಗೆ ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಕೆಪಿಸಿ ಅಕ್ರಮ ಸಂಬಂಧ  ವಿಧಾನಸಭೆಯಲ್ಲಿ  ಉತ್ತರ ನೀಡಿದ ಸಚಿವ  ಕೃಷ್ಣಭೈರೇಗೌಡ, ಕೆಪಿಎಸ್ ಸಿ ಯಲ್ಲಿ ಮಾತ್ರ ಸಮಸ್ಯೆಯಾಗುತ್ತಿದೆ.  ಕೆಇಎನಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ .ಕೆಇಎನಲ್ಲಿ 2000 ಪ್ರಶ್ನೆ ಸಿದ್ದಪಡಿಸಿ ಕನ್ನಡಕ್ಕೆ ಭಾಷಾಂತರ ಮಾಡಲಾಗುತ್ತದೆ.  ಪ್ರಶ್ನಾವಳಿ ಮಾಡುವಾಗ 20-30 ಪ್ರಶ್ನೆ ಆಯ್ಕೆ ಮಾಡುತ್ತಾರೆ. ಆಗಲೇ ಭಾಷಾಂತರ ಮಾಡಿರುವುದರಿಂದ ಲೋಪದೋಷ ಕಡಿಮೆ.  ಇದನ್ನೇ ಕೆಪಿಎಸ್ ಸಿಯಲ್ಲಿ ಅನುಷ್ಠಾನ ಮಾಡಲು ಚರ್ಚೆ ಆಗುತ್ತಿದೆ ಎಂದರು.

ಪ್ರತಿವರ್ಷ  ಇಂತಹ ತಿಂಗಳು ಇಂತಹ ದಿನ ಪರೀಕ್ಷೆ ನಡೆಸಬೇಕು ನಿಗದಿತ ದಿನದಲ್ಲಿ ಕಡ್ಡಾಯವಾಗಿ ಕೆಪಿಎಸ್ ಸಿ ಪರೀಕ್ಷೆ ನಡೆಸಬೇಕು. ಸಿ ಗ್ರೂಪ್ ಹಾಗೂ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯನ್ನ  ಯುಪಿಎಸ್ ಸಿ ಮಾದರಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ. 5 ವರ್ಷಕ್ಕೆ ಎಷ್ಟು ಹುದ್ದೆಗಳ ನೇಮಕಾತಿಯಾಗಲಿದೆ  ಈ ಬಗ್ಗೆ ಮುಂಗಡವಾಗಿ ಕ್ಯಾಲೆಂಡರ್ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕೆಪಿಎಸ್ ಸಿಯಲ್ಲಿ ಇನ್ನೂ ಸುಧಾರಣೆ ಮಾಡಲು ನಿರ್ಧಾರ ಮಾಡಲಾಗಿದ್ದು ಸರ್ವಪಕ್ಷ ಸದಸ್ಯರನ್ನೊಳಗೊಂಡ ಸಮಿತಿ ರಚನೆಗೆ ಸಿಎಂ ಸೂಚನೆ ನೀಡಿದ್ದಾರೆ.  ಮುಂದಿನ  ಅಧಿವೇಶನದೊಳಗೆ ಸಮಿತಿ ವರದಿ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸರ್ಕಾರ ಸಿದ್ದ ಎಂದು ತಿಳಿಸಿದರು.

Key words:  KPSC, Illegal recruitment, Government, Assembly

The post ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാന്റെ ഊർജ കേന്ദ്രങ്ങൾ ആക്രമിക്കുന്നത് അപകടകരമായ കടന്നുകയറ്റം: യു.എ.ഇ

അബുദാബി: ഇറാന്റെ സൗത്ത് പാഴ്സ് ഗ്യാസ് ഫീൽഡിനെ ലക്ഷ്യംവച്ചുള്ള ആക്രമണത്തിൽ അപലപിച്ച്...

'ஈரானிடம் அணு ஆயுதம் இல்லை; கமேனி தன் இறப்பிற்கு பயப்படவில்லை!' – ஜோ கென்ட் 'பரபர' தகவல்கள்

"ஈரானுக்கு எதிரான அமெரிக்காவின் போர் இஸ்ரேலின் அழுத்தத்தால் தொடங்கப்பட்டது... மனசாட்சிக்கு விரோதமாக...

Ravichandran Ashwin: “బుమ్రా తర్వాత భారత్ పరిస్థితి ఏంటి?” టీమిండియాకు అశ్విన్ బిగ్ వార్నింగ్..

Ravichandran Ashwin: టీమిండియాలో జస్ప్రీత్ బుమ్రా పాత్రను ప్రత్యేకంగా చెప్పనవసరం లేదు....

ಉಪ ಚುನಾವಣೆ: ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಮಾರ್ಚ್,18,2026 (www.justkannada.in):  ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ...