28
February, 2026

A News 365Times Venture

28
Saturday
February, 2026

A News 365Times Venture

ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ರೆ ವಿಧಾನಸೌಧದಲ್ಲೇ ಮಲಗುವೆ- ವಾಟಾಳ್ ನಾಗರಾಜ್ ಎಚ್ಚರಿಕೆ

Date:

ಬೆಂಗಳೂರು,ಫೆಬ್ರವರಿ,27,2026 (www.justkannada.in):  ಕರ್ನಾಟಕದಲ್ಲಿ ವಿಧಾನಸೌಧದೊಳಗೆ ದೃಶ್ಯ ಮಾಧ್ಯಮ ಬಿಡಬಾರದೆಂದು ನಿರ್ಧಾರವಾಗಿದೆ. ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗಿ ಪ್ರತಿಭಟನೆ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ವಿಧಾನಸೌಧಕ್ಕೆ ದೃಶ್ಯ ಮಾಧ್ಯಮಗಳ ನಿರ್ಬಂಧ ಮಾಡಿರುವುದು ಅಪಚಾರ ಅವಲಕ್ಷಣ. ದೃಶ್ತ ಮಾಧ್ಯಮ ನಿರ್ಬಂಧ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಅದೇಶ ಹಿಂಪಡೆಯದಿದ್ದರೆ ಸರಕಾರದ ವಿರುದ್ದ ಹೋರಾಟ ಮಾಡುವೆ ಎಂದರು.

ಮಾಧ್ಯಮದವರನ್ನ ಗುಲಾಮರಂತೆ ನೋಡಬಾರದು. ಯಾರು ಈ ತೀರ್ಮಾನ ತೆಗೆದುಕೊಂಡಿದ್ದಾರೋ ವಾಪಸ್ ಪಡೆಯಬೇಕು. ಸರ್ಕಾರದ ಈ ಆದೇಶ ಪ್ರಜಾಪ್ರಭುತ್ವವನ್ನು  ಅಣಕಿಸುವಂತಿದೆ. ಸ್ಪೀಕರ್,  ಸಿಎಂ ಚಿಂತಿಸಬೇಕು. ನೀವೇನು ಪರದೆ ಹಿಂದೆ ಇದ್ದೀರಾ?  ಎಲ್ಲೆಂದರಲ್ಲಿ ನಿಮ್ಮನ್ನ ಕೇಳಬೇಕು.  ನಿಮ್ಮನ್ನು ಪ್ರಶ್ನಿಸಬಾರದು ಅಂದರೆ ಹೇಗೆ?  ನಾನು ಅಸೆಂಬ್ಲಿಯಲ್ಲಿ ಇದ್ದಿದ್ದರೇ ಅದರ ರೂಪವೇ ಬೇರೆ ಆಗುತ್ತಿತ್ತು ವಿಧಾನಸೌಧಕ್ಕೆ ದೃಶ್ಯ ಮಾದ್ಯಮ ನಿರ್ಬಂಧಿಸಿದ್ದು ಗಂಭೀರವಾದುದು.  15 ದಿನದಲ್ಲಿ ಸರ್ಕಾರ ತೀರ್ಮಾನಕ್ಕೆ ಬರದಿದ್ದರೇ ವಿಧಾನಸೌಧದ ಬಾಗಿಲಲ್ಲೇ ಮಲಗುವೆ ಎಂದು ವಾಟಾಳ್ ನಾಗರಾಜ್ ವಾರ್ನಿಂಗ್ ನೀಡಿದರು.

Key words: Vatal Nagaraj, warns, Vidhana Soudha, media, restriction

The post ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ರೆ ವಿಧಾನಸೌಧದಲ್ಲೇ ಮಲಗುವೆ- ವಾಟಾಳ್ ನಾಗರಾಜ್ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ന്യായമല്ലാത്ത ആവശ്യം; ത്രിരാഷ്ട്ര ആണവ നിരായുധീകരണത്തില്‍ പങ്കെടുക്കണമെന്ന അമേരിക്കയുടെ ആവശ്യം തള്ളി ചൈന

ബീജിങ്: റഷ്യ ഉള്‍പ്പെടുന്ന ത്രികക്ഷി ആണവ നിരായുധീകരണ ചര്‍ച്ചയില്‍ ചേരണമെന്ന അമേരിക്കയുടെ...

Off The Record: బట్టబయలైన పాలమూరు కాంగ్రెస్‌ గ్రూప్‌ పాలిటిక్స్‌

Off The Record: పాలమూరు మేయర్‌ ఎన్నిక ఎపిసోడ్‌లో చిత్ర విచిత్రాలు...

ದಲಿತ ಸಿಎಂಗೂ ಮೊದಲು ಮೀಸಲಾತಿ ಸಮಸ್ಯೆ ಬಗಹರಿಸಿ- ಶ್ರೀರಾಮುಲು

ಶಿವಮೊಗ್ಗ,ಫೆಬ್ರವರಿ,27,2026 (www.justkannada.in): ರಾಜ್ಯದಲ್ಲಿ ದಲಿತ ಸಿಎಂ ವಿಚಾರದ ಕಾಂಗ್ರೆಸ್ ನಾಯಕರು...