ಬೆಂಗಳೂರು,ಫೆಬ್ರವರಿ,21,2026 (www.justkannada.in): ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ತಪ್ಪು ಮಾಡಿದವರ ವಿರುದ್ದ ಕ್ರಮ ಆಗುತ್ತದೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರು ತಪ್ಪುಮಾಡಿದ್ದಾರೋ ಅವರ ವಿರುದ್ದ ಖಂಡಿತ ಕ್ರಮ ಆಗುತ್ತೆ. ಕಲ್ಲು ತೂರಿದ್ದು ಯಾರು ಅಂತಾ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಯಾರಿಗೂ ಇಲ್ಲಿ ನಿಯಮ ಬೇರೆ ಇರಲ್ಲ. ಕಾನೂನು ಸಂವಿಧಾನ ಕರ್ನಾಟಕದಲ್ಲಿ ಎಲ್ಲರಿಗೂ ಒಂದೇ ಎಂದರು.
ಯಾರು ಕಾನೂಣು ಕೈಗೆ ತೆಗೆದು ಕೊಳ್ಳುತ್ತಾರೋ ಅವರಿಗೆ ಶಿಕ್ಷೆ ಆಗುತ್ತದೆ. ಕ್ರಮ ಕೈಗೊಳ್ಳುವ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ. ಪ್ರಕರಣ ಕುರಿತು ಏನೇ ಆರೋಪ ಮಾಡಲಿ ಕಲ್ಲು ತೂರಾಟ ನನ್ನಿಂದ ಆಗಿದ್ದರೆ ನಾನು ಕೂಡ ಜೈಲಿಗೆ ಹೋಗುತ್ತೇನೆ ಎಲ್ಲದಕ್ಕೂ ನಿಯಮ ಇದೆ ಅದನ್ನು ಮೀರಿ ಹೋಗಲಿಕ್ಕೆ ಆಗಲ್ಲ ಎಂದರು.
Key words: stone pelting, Action, Minister, Priyank Kharge
The post ತಪ್ಪು ಮಾಡಿದವರ ವಿರುದ್ದ ಕ್ರಮ ನಿಶ್ಚಿತ- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





