18
February, 2026

A News 365Times Venture

18
Wednesday
February, 2026

A News 365Times Venture

ನಾಯಕತ್ವ ಬದಲಾವಣೆ: ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿಲಿ- ಕಾಂಗ್ರೆಸ್ ಶಾಸಕ

Date:

ದಾವಣಗೆರೆ,ಫೆಬ್ರವರಿ,17,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ  ಆಗಿಲ್ಲ ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಲಿ ಇದರಿಂದ ಗೊಂದಲ ಇರಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜು ಶಿವಗಂಗಾ, ಸಿಎಂ ಎರಡುವರೆ ವರ್ಷ ಒಪ್ಪಂದ ಆಗಿಲ್ಲ ಮಾತು ಕೊಟ್ಟಿಲ್ಲ ಎಂದು ಹೇಳಲಿ.  ಕೂಡಲೇ ಹೈಕಮಾಂಡ್ ಎಂಟ್ರಿಯಾಗಿ ನಾಯಕತ್ವ ವಿಚಾರ ಇತ್ಯರ್ಥಪಡಿಸಬೇಕು. ಮುಖ್ಯಮಂತ್ರಿ ಹೇಳಿಕೆ ಗೊಂದಲಗಳಿಗೆ ಕೂಡಲೇ ಹೈಕಮಾಂಡ್ ಇದಕ್ಕೆ ಎಂಟ್ರಿಯಾಗಿ ಇತ್ಯಾರ್ಥ ಮಾಡಬೇಕು. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಎಲ್ಲರೂ ಶಕ್ತಿ ತೋರಿಸಬಾರದು . ಅವರಿಗೆ ಅವರದ್ದ ಆದ ಶಕ್ತಿ ಇದೆ. ಸರಿಯಾದ ಸಮಯದಲ್ಲಿ ಹೈಕಮಾಂಡ್ ಉತ್ತರಿಸುತ್ತದೆ ಎಂದು ಬಸವರಾಜು ಶಿವಗಂಗಾ ಹೇಳಿದರು.

ಕೆಲ ಶಾಸಕರ ವಿದೇಶಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗುವ ಅವಶ್ಯಕತೆ ಇರಲಿಲ್ಲ. ಬಜೆಟ್‌ಗೆ ಮುನ್ನ ವಿದೇಶ ಪ್ರವಾಸ ಹೋಗೋದು ಸರಿಯಲ್ಲ.‌ ಅವರಿಗೂ ವೈಯಕ್ತಿಕ ಜೀವನ ಇರುತ್ತೆ ಹೋಗುತ್ತಾರೆ. ಅದನ್ನು ನಾವು ಯಾವುದೇ ಕಾರಣಕ್ಕೂ ಅಡ್ಡಿ ಪಡಿಸೋದಿಲ್ಲ ಎಂದರು.

Key words: Leadership change, CM, agreement, Congress MLA

The post ನಾಯಕತ್ವ ಬದಲಾವಣೆ: ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿಲಿ- ಕಾಂಗ್ರೆಸ್ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ആണവ കരാറിനുള്ള പാത തുറന്നു; മാര്‍ഗനിര്‍ദേശ തത്വങ്ങളില്‍ ധാരണയായി: യു.എസുമായുള്ള ചര്‍ച്ചയില്‍ ഇറാന്‍

ജനീവ: ആണവ പദ്ധതിയുമായി ബന്ധപ്പെട്ട് യു.എസുമായി ഒരു കരാറിന്റെ പാതയിലാണ് രാജ്യമെന്ന്...

திமுக – காங்கிரஸ் கூட்டணி சலசலப்பு; திருமாவளவனின் கருத்து என்ன?!

தமிழக சட்டமன்றத் தேர்தல் நெருங்கும் நிலையில் அரசியல் கட்சிகள் தேர்தல் பணிகளில்...

ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ

ಬೆಂಗಳೂರು ಫೆಬ್ರವರಿ,17,2026 (www.justkannada.in): ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ...