26
March, 2026

A News 365Times Venture

26
Thursday
March, 2026

A News 365Times Venture

ಮಾನವೀಯತೆ ನೆಲೆ, ವೈಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾಗು ಕೃತಿಗಳು ಜನಪ್ರಿಯಗೊಳ್ಳುತ್ತವೆ- ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್

Date:

ಬೆಂಗಳೂರು, ಅಕ್ಟೋಬರ್,25,2025 (www.justkannada.in):  ಯಾವುದೇ ಒಂದು ಕೃತಿ ಮಾನವೀಯತೆಯ ನೆಲೆ , ಜನಪರತೆ ಮತ್ತು ವೃಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾದರೆ ಅವು ಸಹಜವಾಗಿಯೇ ಜನಪ್ರಿಯಗೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಏರ್ಪಡಿಸಿದ್ದ ತುರುವನೂರು ಮಂಜುನಾಥ ಅವರ ಅಂತರ್ಮಿಡಿತ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಲಂಕೇಶ್ ಅವರ ಬರಹಗಳು ಸಾಮಾನ್ಯವಾಗಿ ಬಹುಮುಖ ವಿಚಾರಗಳ ಮತ್ತು ಜನರ ಅಶೋತ್ತರಗಳ ನಾಡಿಮಿಡಿತದ ಬರಹಗಳಾಗಿದ್ದವು ಹಾಗಾಗಿಯೇ ಅವರ ಕೃತಿಗಳು ಜನಪ್ರಿಯಗೊಂಡಿದ್ದವು. ಆ ನಿಟ್ಟಿನಲ್ಲಿ ತುರುವನೂರು ಮಂಜುನಾಥ ಅವರ ಲೇಖನಗಳು ವೈಚಾರಿಕ ನೆಲಘಟ್ಟಿನ ಮೇಲೆ ರಚಿತವಾಗಿವೆ ಎಂದು ಅಭಿಪ್ರಾಯ ಪಟ್ಟರು.

ಪತ್ರಿಕೆಯ ಸಂಪಾದಕರಾದವರಿಗೆ ಸಂಪಾದಕೀಯ ಬರಹಗಳು ಜನಮಿಡಿತದ ಮಿಡಿತವಾಗಿರಬೇಕು  ,ಅಗಾದಾಗ ಮಾತ್ರ ಯಶಸ್ವಿಯಾಗುತ್ತವೆ ಮಂಜುನಾಥ ಅವರ ಅಂತರ್ಮಿಡಿತ  ಬರಹಗಳಲ್ಲಿ ಬಹುತೇಕ ಓದುಗರ ಅಗತ್ಯತೆಗನುಗುಣವಾಗಿವೆ ಆದರೆ ಈಗ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ  ಎಂದರು.

ಸಂಪಾದಕರಾದವರಿಗೆ. ಖ್ಯಾತ ಬರಹಗಾರರ, ಬರಹಗಳ ಓದಿನ ಹಸಿವಿರಬೇಕು ಆ ಬರಹಗಳ ಓದಿನಿಂದಲೇ ತಮ್ಮ ಬರಹಗಳು   ಮತ್ತಷ್ಟು ಗಟ್ಟಿಯಾಗುತ್ತವೆ   ಎಂದ ಅವರು ಲಂಕೇಶ್ ಖ್ಯಾತ ಬರಹಗಾರರ ಓದಿನಿಂದಲೇ ಅವರ ಬರಹಗಳು ಜನಪ್ರಿಯಗೊಂಡಿದ್ದವು ಎಂದು ನುಡಿದರು.

ಅಂತರ್ಮಿಡಿತ ಕೈತಿಯ ಬಗ್ಗೆ ಮಾತನಾಡಿದ ಡಾ.ದಾದಾಪೀರ್ ನವಿಲೇಹಾಳ್ ಅವರು ಮಂಜುನಾಥ ಅವರ ಬಹುತೇಕ ಬರಹಗಳಲ್ಲಿ  ಆಪ್ತಭಾವತೆ ಇದೆ,ವೈಚಾರಿಕ ನೆಲೆಘಟ್ಟಿನ ಮೇಲೆ  ರೂಪಿತವಾಗಿವೆ ,ಆಯಾ ವಾರದ ವಿದ್ಯಮಾನಗಳ ಬರಹಗಳಾದರೂ ಯಾವಾಗಲೂ ಅವು ಪ್ರಸ್ತುತ ಎನ್ನುವ ರೀತಿಯಲ್ಲಿ ವೆ ಎಂದು ಅಭಿಪ್ರಾಯದಲ್ಲಿ ಪಟ್ಟರು.

ಈ ಕೃತಿಯಲ್ಲಿ ವಿಚಾರ,ಧರ್ಮ ಮತ್ತು ರಾಜಕಾರಣದ ಮೂರು ವರ್ಗ ಮಾಡಿದ್ದರೂ ಎಲ್ಲವೂ ವಿಚಾರಪೂರ್ವ ಬರಹಗಳಾಗಿವೆ,ರಾಜಕಾರಣಿಗಳು ಜಾತಿ,ಧರ್ಮ ವನ್ನು ಹೇಗೆ ಮತಗಳಿಕೆಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ,ಅದರಿಂದ ಹೇಗೆ ಅಶಾಂತಿಗೆ ಕಾರಣವಾಗಿದೆ ಎನ್ನುವ ಕುರಿತು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ ಎಂದರು.

ಇಂದು ಪತ್ರಕರ್ತರ ಬೆಲಕವಣಿಗೆಯೇ ವಿಚಿತ್ರವಾಗಿದೆ ಪಕ್ಷ,ಧರ್ಮಗಳ ಪರವಾಗಿ ತುತ್ತೂರಿ ಊದುತ್ತಿರುವ ಸಂದರ್ಭದಲ್ಲಿ ಮಂಜುನಾಥ ಅವರ ಈ ಬರಹಗಳು ನಿಜವಾದ ಒಬ್ಬ ಪತ್ರಕರ್ತ ಸಮಾಜದಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲರಿಗೂ ಗೊತ್ತಿದ್ದಂತೆ ಲಂಕೇಶ್ ಅವರ ವ್ಯಕ್ತಿತ್ವವೇ ಮಾದರಿಯಾಗಿತ್ತು ರಾಜಕಾರಣಿಗಳು ಪತ್ರಕರ್ತರ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದರು.ಯಾರೆ ರಾಜಕಾರಣಿಗಳಾದರೂ ಅವರನ್ನೆ ಹುಡುಕಿಕೊಂಡು ಹೋಗಬೇಕಿತ್ತು ಆದರೆ ಈಗ ಕಾಲ ಬದಲಾಗಿದೆ ಪತ್ರಕರ್ತರೆ ರಾಜಕಾರಣಿಗಳ ಮೊರೆ ಹೋಗುತ್ತಿದ್ದಾರೆ ಹಾಗಾಗಿಯೇ ಸುದ್ದಿಗಳ ಗುಣಮಟ್ಟ ಕ್ಷೀಣಿಸುತ್ತಿದೆ ಎಂದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ,ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ, ಸಾಹಿತಿ ವಿಶಾಲ ಆರಾಧ್ಯ ಇದ್ದರು.

Key words: Works based, humanity, ideological, popular, Senior writer, Shudra Srinivas

The post ಮಾನವೀಯತೆ ನೆಲೆ, ವೈಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾಗು ಕೃತಿಗಳು ಜನಪ್ರಿಯಗೊಳ್ಳುತ್ತವೆ- ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪಾಲಿಕೆಯ 2026-27ನೇ ಆಯವ್ಯಯವು ‘ಸತ್ವ ಇಲ್ಲದ ಬಜೆಟ್’- ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ...

ഇറാന്റെ തിരിച്ചടിയില്‍ സൈനിക താവളങ്ങള്‍ തകര്‍ന്നു; ഹോട്ടലുകളില്‍ അഭയം തേടി അമേരിക്കന്‍ സൈന്യം; റിപ്പോര്‍ട്ട്

വാഷിങ്ടണ്‍: ഇറാന്റെ പ്രത്യാക്രമണത്തില്‍ സൈനിക താവളങ്ങള്‍ തകര്‍ന്നതോടെ, പശ്ചിമേഷ്യയിലെ യു.എസ് സേന...

"நாங்கள் சிரித்துக்கொண்டே அழுகிறோம்.!"- திமுக-வின் தொகுதிப் பங்கீடு குறித்து மதிமுக அர்ஜுனராஜ்

திமுக தங்களுக்கு கொடுத்த எண்ணிக்கை, சின்னம் தொடர்பாக தங்களுக்கு வருத்தம் உள்ளதாக...

Karnataka: క్లాస్‌లోనే విద్యార్థినికి ప్రొఫెసర్ ‘‘ఐ లవ్ యూ’’.. ఆ తర్వాత ఏం జరిగిందంటే..

Karnataka: బాధ్యతాయుతమైన ప్రొఫెసర్ హోదాలో ఉన్న ఒక వ్యక్తి నీచంగా ప్రవర్తించాడు....