10
March, 2026

A News 365Times Venture

10
Tuesday
March, 2026

A News 365Times Venture

ಮೈಸೂರಿನಲ್ಲಿ ಮಕ್ಕಳಿಗಾಗಿ ‘ಆರ್ಟ್ ಇಂಟ್ರೋ’ ಬೇಸಿಗೆ ಶಿಬಿರ.

Date:

ಮೈಸೂರು,ಮಾರ್ಚ್,31,2025 (www.justkannada.in): ಮೈಸೂರಿನ ಹಾರ್ಡ್ವೀಕ್ ಶಾಲೆ ಆವರಣದಲ್ಲಿರುವ  ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಮಕ್ಕಳ ಸೃಜನಶೀಲತೆಗೆ ಉತ್ತೇಜನ ನೀಡುವ ‘ART intro – 2025’ ಬೇಸಿಗೆ ಶಿಬಿರ ನಡೆಯಲಿದೆ.

‘ಆರ್ಟ್ ಇಂಟ್ರೋ’ ಬೇಸಿಗೆ ಶಿಬಿರ ಮಕ್ಕಳನ್ನು ಕಲೆಯ ಪ್ರಪಂಚಕ್ಕೆ ಪರಿಚಯಿಸಿ, ಅವರ ಸೃಜನಶೀಲತೆಯನ್ನು ಉತ್ತೇಜಿಸುವ ವಿಶಿಷ್ಟ ಕಾರ್ಯಕ್ರಮ. ನಾಟಕ, ದೃಶ್ಯಕಲೆ ಮತ್ತು ಸಂಗೀತದ ಮೂಲಕ ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಲಿಯುತ್ತಾರೆ. ನಾಟಕವು ಆತ್ಮವಿಶ್ವಾಸ ಮತ್ತು ತಂಡದ ಒಗ್ಗೂಡಿಸುವಿಕೆಯನ್ನು ಹೆಚ್ಚಿಸುತ್ತದೆ. ದೃಶ್ಯಕಲೆ ಅವರ ಕಲ್ಪನಾಶಕ್ತಿಯನ್ನು ಪ್ರೇರೇಪಿಸಿ, ಸೂಕ್ಷ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಸಂಗೀತ ಮತ್ತು ಲಯವು ಮಕ್ಕಳ ಭಾಷಾ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಈ ಚಟುವಟಿಕೆಗಳು ಕಲೆಯನ್ನು ದಿನನಿತ್ಯದ ಜೀವನದ ಭಾಗವನ್ನಾಗಿ ಪರಿವರ್ತಿಸಲು ಪ್ರೇರೇಪಿಸಿ, ಮಕ್ಕಳಿಗೆ ಹೊಸದನ್ನು ಕಲಿಯುವ ಉತ್ಸಾಹವನ್ನು ನೀಡುತ್ತವೆ. ‘ಆರ್ಟ್ ಇಂಟ್ರೋ’ ಕಲಿಕೆಯ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಈ ಬೇಸಿಗೆ ಶಿಬಿರವೂ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. ಬ್ಯಾಚ್ 1: ಏಪ್ರಿಲ್ 14 ರಿಂದ ಮೇ 7, 2025 ಮತ್ತು ಬ್ಯಾಚ್ 2: ಮೇ 8 ರಿಂದ ಮೇ 31, 2025. ಶಿಬಿರದ ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 4.00. ಭಾನುವಾರ ರಜೆ ಇರುತ್ತದೆ. 8 ವರ್ಷ ಮೇಲ್ಪಟ್ಟ ಮಕ್ಕಳು ಶಿಬಿರಕ್ಕೆ ನೋಂದಾಯಿಸಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು  ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಬಿ. ರಾಜೇಶ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845605012 / 9945158970

Key words: Art Intro, summer camp, children, Mysore.

The post ಮೈಸೂರಿನಲ್ಲಿ ಮಕ್ಕಳಿಗಾಗಿ ‘ಆರ್ಟ್ ಇಂಟ್ರೋ’ ಬೇಸಿಗೆ ಶಿಬಿರ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

LPG ಸಿಲಿಂಡರ್ ಕೊರತೆ: ಕೇಂದ್ರದ ವಿರುದ್ದ ಯೂಥ್ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ

ಶಿವಮೊಗ್ಗ,ಮಾರ್ಚ್,10,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮದ ಬಿಸಿ ಭಾರತಕ್ಕೂ...

ഛത്തീസ്ഗഡില്‍ ബി.ജെ.പി നേതാവിന്റെ തോട്ടത്തില്‍ കഞ്ചാവ് കൃഷി; സഭയില്‍ പ്രതിഷേധം, 29 കോണ്‍ഗ്രസ് എം.എല്‍.എമാര്‍ക്ക് സസ്‌പെന്‍ഷന്‍

റായ്പ്പൂര്‍: ഛത്തീസ്ഗഡിലെ ദുര്‍ഗ് ജില്ലയില്‍ ബി.ജെ.പി നേതാവിന്റെ കൃഷിയിടത്തില്‍ വന്‍തോതില്‍ കഞ്ചാവ്...

'25 நாள்கள் முன்பு சிலிண்டர் புக் செய்தவர்களுக்கே முன்னுரிமை!' நெருக்குகிறதா தட்டுப்பாடு?

ஈரான் போரினால் உலகம் முழுவதும் எரிசக்திகளில் கடும் தட்டுப்பாடு ஏற்பட்டு வருகிறது....