20
March, 2026

A News 365Times Venture

20
Friday
March, 2026

A News 365Times Venture

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ: ರಕ್ಷಣೆಗಾಗಿ ಮನವಿ

Date:

ಮೈಸೂರು,ಮಾರ್ಚ್,22,2025 (www.justkannada.in): ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ ಗಂಡನ ಪ್ರೈವೇಟ್ ಪಾರ್ಟ್ ಗೆ ಒದ್ದು ದೌರ್ಜನ್ಯ ನಡೆಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯ ಕಗ್ಗಲೂರು ಗ್ರಾಮದಲ್ಲಿ ನಡೆದಿದೆ.

ಮಲ್ಲೇಶ್ ಹಾಗೂ ಸವಿತಾ ದಂಪತಿ ಹಲ್ಲೆಗೆ ಒಳಗಾದವರು. ಮೇಲ್ವರ್ಗದ ಗುಂಪು ಹಲ್ಲೆ ನಡೆಸಿದೆ ಎಂದು ದಂಪತಿ ದೂರಿನಲ್ಲಿ ತಿಳಿಸಿದ್ದಾರೆ. ಯೋಗೇಶ್, ಬಿಂದು, ಗುರು, ಅಶೋಕ್, ಉಮಾ, ಮಲ್ಲಹಳ್ಳಿ ರತ್ನ ಶಿವಮೂರ್ತಿ, ಮಲ್ಲಣ್ಣ, ಅನಿಲ್, ಚರಣ್, ಮಂಜು ಹಾಗೂ ಇತರರು ಹಲ್ಲೆ ನಡೆಸಿದವರು.

ಮಲ್ಲೇಶ್ ಹಾಗೂ ಸವಿತ ದಂಪತಿ ಮಗ ಮಲ್ಲಿಕಾರ್ಜುನ ಹಣಕ್ಕಾಗಿ ಪಕ್ಕದ ಬೀದಿಯಲ್ಲಿರುವ ಮನೆಗೆ ಹೋಗಿದ್ದಾರೆ. ಆಗ ಈ ಬೀದಿಗೆ ಏಕೆ ಬಂದೆ ಎಂದು ಯೋಗೇಶ್ ಪ್ರಶ್ನಿಸಿ ಹುಡುಗನಿಗೆ ಬೈದಿದ್ದಾನೆ. ಈ ಬಗ್ಗೆ ಸವಿತಾ ವಿರೋಧಿಸಿದಾಗ ಮನೆಗೆ ನುಗ್ಗಿ ಹೊಡೆದಿದ್ದಾರೆ. ನಂತರ ರಾತ್ರಿ ಗಂಡ ಮಲ್ಲೇಶ್ ಬಂದ ಸುಮಾರು 20 ಜನರ ಗುಂಪು ಮನೆಗೆ ನುಗ್ಗಿ ಮಲ್ಲೇಶ್ ಪ್ರೈವೇಟ್ ಪಾರ್ಟ್ ಗೆ ಒದ್ದು ದೊಣ್ಣೆಯಿಂದ ತಲೆಗೆ ಹೊಡೆದು ದೌರ್ಜನ್ಯ ನಡೆಸಿದ್ದಾರೆ.

ಮೇಲ್ವರ್ಗದ ಜನತೆ ನಡೆಸಿದ ದೌರ್ಜನ್ಯಕ್ಕೆ ಕೆಳವರ್ಗದ ದಂಪತಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ಕೆಳವರ್ಗದ ನಾವು ಕೇವಲ ಐದಾರು ಕುಟುಂಬಗಳಿವೆ. ಹೆದರಿಕೆಯಲ್ಲೇ ಜೀವನ ಸಾಗಿಸುತ್ತಿದ್ದೇವೆ. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡುವಂತೆ ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Key words: mysore, assult, Couple, protection

The post ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ: ರಕ್ಷಣೆಗಾಗಿ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കേരളത്തിലടക്കം പരാജയപ്പെടുത്തണം; നിയമസഭാ തെരഞ്ഞെടുപ്പുകളില്‍ ബി.ജെ.പിയ്ക്ക് തിരിച്ചടി നല്‍കണമെന്ന് സംയുക്ത കിസാന്‍ മോര്‍ച്ച

ന്യൂദല്‍ഹി: വരാനിരിക്കുന്ന നിയമസഭാ തെരഞ്ഞെടുപ്പുകളില്‍ ബി.ജെ.പിയെ പരാജയപ്പെടുത്താന്‍ ആഹ്വാനവുമായി സംയുക്ത കിസാന്‍...

சீனா நோக்கிச் சென்ற 7 ரஷ்ய கப்பல்கள்; திடீரென இந்தியாவுக்கு வருவது ஏன்?!

சீனாவுக்குச் செல்லவிருந்த ஏழு ரஷ்ய கச்சா எண்ணெய் கப்பல்கள், திடீரென திசைமாற்றப்பட்டு...

War Effect: భారత్ గ్యాస్ దిగుమతులపై యుద్ధం దెబ్బ.. ఇంధన పొదుపు తప్పదా..?

మధ్యప్రాచ్యంలో అమెరికా, ఇజ్రాయెల్ జరిపిన దాడులకు ప్రతికారంగా ఇరాన్ చేస్తున్న దాడుల...

താനൂരില്‍ നിന്നും തിരൂരിലേക്ക്; വി. അബ്ദുറഹിമാന്‍ മണ്ഡലം മാറി

മലപ്പുറം: താനൂര്‍ മണ്ഡലത്തില്‍ എല്‍.ഡി.എഫ് സ്ഥാനാര്‍ത്ഥിയായി പ്രഖ്യാപിച്ചിരുന്ന വി. അബ്ദുറഹിമാന്‍ മണ്ഡലം...