ದಾವಣಗೆರೆ,ಏಪ್ರಿಲ್,14,2026 (www.justkannada.in): ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಹಿರಿಯ ಶಾಸಕರು ಹೈಕಮಾಂಡ್ ಭೇಟಿ ಮಾಡಲು ನವದೆಹಲಿ ತೆರಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಹಿರಿಯ ಶಾಸಕರು ದೆಹಲಿಗೆ ಹೋಗಿದ್ದಾರೆ. ಅದೇ ರೀತಿ ಐವರು ಹೊಸಬರಿಗೆ ಅವಕಾಶ ನೀಡಲಿ. ಹಿರಿಯ ಶಾಸಕರ ಜೊತೆಗೆ ರವಿಗಣಿಗ ಸೇರಿ ಐವರಿಗೆ ಅವಕಾಶ ನೀಡಲಿ ಹಳೇ ಬೇರು ಹೊಸ ಚಿಗುರು ಎನ್ನುವಂತೆ ಉತ್ತಮ ಆಡಳಿತ ನಡೆಬಸಬಹುದು ಎಂದು ತಿಳಿಸಿದರು.
ನನಗೆ ಸಚಿವ ಸ್ಥಾನ ಕೊಟ್ಟರೇ ಬೇಡ ಅನ್ನಲ್ಲ. ನಾನೇನು ಸನ್ಯಾಸಿಯಲ್ಲ. ಡಿಕೆ ಶಿವಕುಮಾರ್ ಕೂಡ ಸಿಎಂ ಆಗವೇಕು ಎನ್ನುವುದು ನಮ್ಮ ಆಸೆ. ಅದನ್ನೆಲ್ಲಾ ನಿರ್ಧಾರ ಮಾಡುವುದು ಹೈಕಮಾಂಡ್. ಪಕ್ಷಕ್ಕೆ ಮುಜುಗರ ಆಗಬಹುದೆಂದು ಡಿಕೆ ಶಿವಕುಮಾರ್ ವಾರ್ನಿಂಗ್ ನೀಡಿರಬಹುದು ಎಂದರು.
Key words: Congress MLA, Shivaganga Basavaraj, ministerial post
The post ಹಿರಿಯ ಶಾಸಕರ ಜೊತೆ ಐವರು ಹೊಸ ಶಾಸಕರಿಗೂ ಸಚಿವ ಸ್ಥಾನ ನೀಡಲಿ- ಕಾಂಗ್ರೆಸ್ ಶಾಸಕ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





