ತುಮಕೂರು,ಅಕ್ಟೋಬರ್,9,2025 (www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ಪುನರಚನೆ ವಿಚಾರದ ಬಗ್ಗೆ ಚರ್ಚೆಯಾಗುತ್ತಿದ್ದು ಈ ನಡುವೆ ತಮಗೆ ಮತ್ತೆ ಮಂತ್ರಿಗಿರಿ ಸಿಗುತ್ತಾ ಎಂಬ ವಿಷಯದ ಕುರಿತು ಮಾಜಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಎನ್ ರಾಜಣ್ಣ, ಬಿಹಾರ ಚುನಾವಣೆ ಮುಗಿಯಲಿ. ಸಿಎಂ ಸಿದ್ದರಾಮಯ್ಯ ಮೇಲೆ ನನಗೆ ವಿಶ್ವಾಸವಿದೆ. ನಾನು ಸಚಿವಸ್ಥಾನ ಕೇಳಲು ಹೋಗಲ್ಲ. ನಾನು ಅಧಿಕಾರದಲ್ಲಿದ್ದರೂ ಒಂದೇ ಇಲ್ಲಿದ್ದರೂ ಒಂದೇ. ಅಧಿಕಾರದಲ್ಲಿದ್ದಾಗ ಎರಡು ವರ್ಷ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ಸಿಎಂ ಸಿದ್ದರಾಮಯ್ಯ 2018ರಲ್ಲಿ ನನಗೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ನಾನು ಸೋತ ಕಾರಣ ತುಕಾಂಗೆ ಸಚಿವ ಸ್ಥಾನ ನೀಡಿದರು. ಈ ಚುನಾವಣೆಯಲ್ಲಿ ಗೆದ್ದಾಗ ಸಹಕಾರ ಖಾತೆ ಕೊಡಿ ಎಂದಿದ್ದೆ. ನನ್ನಅನುಭವದ ಆಧಾರದ ಮೇಲೆ ಸಹಕಾರ ಖಾತೆ ಕೊಟ್ಟರು ಎಂದು ಕೆಎನ್ ರಾಜಣ್ಣ ತಿಳಿಸಿದರು.
Key words: Ministerial post, KN Rajanna, confidence, CM Siddaramaiah
The post ಮತ್ತೆ ಸಚಿವ ಸ್ಥಾನ ವಿಚಾರ: ಸಿಎಂ ಸಿದ್ದರಾಮಯ್ಯ ಮೇಲೆ ವಿಶ್ವಾಸವಿದೆ ಎಂದ ಕೆ.ಎನ್ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





