31
March, 2026

A News 365Times Venture

31
Tuesday
March, 2026

A News 365Times Venture

1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳಾಗಿ ಗುರ್ತಿಸಿ ಘೋಷಿಸಿದ ಸರ್ಕಾರ

Date:

ಬೆಂಗಳೂರು,ಸೆಪ್ಟಂಬರ್, 15,2025 (www.justkannada.in): ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ರಾಜ್ಯದ 1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳೆಂದು ಗುರುತಿಸಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಒಟ್ಟು 1275 ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರದ ಅನುಮೋದನೆ ನೀಡಿ ಆದೇಶಿಸಿದೆ.

ಸದರಿ ಸ್ಥಳಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಅನುದಾನ ಲಭ್ಯತೆಯನುಸಾರ ವಿವರವಾದ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು, ಅಂದಾಜು ಪಟ್ಟಿ/ನಕ್ಷೆಗಳನ್ನು ಸಿದ್ಧಪಡಿಸಿ ತಾಂತ್ರಿಕ ಪರಿಶೀಲನೆಗೊಳಪಡಿಸಿ ಟೆಂಡರ್‌ಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚಿಸಲಾಗಿದೆ.

ಮೈಸೂರು ತಾಣಗಳ ಪಟ್ಟಿ ಹೀಗಿದೆ..

ಪ್ರವಾಸಿ ತಾಣಗಳೆಂದು ಘೋಷಿಸಿರುವ ಪಟ್ಟಿಯಲ್ಲಿ ಮೈಸೂರಿನ 13 ಪಾರಂಪರಿಕ ಕಟ್ಟಡಗಳನ್ನ  ಪ್ರವಾಸಿ ತಾಣಗಳೆಂದು ಗುರುತಿಸಿ ಅನುಮೋದನೆ ನೀಡಲಾಗಿದೆ. ಮೈಸೂರಿನ ಶುಕವನ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತ ಪೀಠ, ರೈಲು ಸಂಗ್ರಹಾಲಯ, ಆರ್ ಕೆ ನಾರಾಯಣ್ ಅವರ ಮನೆ, ಸೆಂಟ್ ಜೋಸೆಫ್ ಕ್ಯಾಥೆಡ್ರಲ್ ( ಸೆಂಟ್ ಫಿಲೋಮಿನಾ ಶ್ರೈನ್),  ಓರಿಯಂಟಲ್ ರಿಸರ್ಚ್ ಇನ್ಸ್ ಟಿಟ್ಯೂಟ್, ಮೈಸೂರು ಸಿಲ್ಕ್ ವೇವಿಂಗ್ ಕಾರ್ಖಾನೆ,  ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯ, ಪಿರಿಯಾಪಟ್ಟಣದಲ್ಲಿರುವ ಶ್ರೀ ಶಿಡ್ಲುಮಲ್ಲಿಕಾರ್ಜುನಸ್ವಾಮಿ ದೇವಾಲಯ, ಟೀ.ನರಸೀಪುರದಲ್ಲಿನ ಮಹಾಲಕ್ಷ್ಮೀ ಸಮೇತ ಗುಂಜಾನರಸಿಂಹಸ್ವಾಮಿ ದೇವಸ್ಥಾನ, ಕೆಆರ್ ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನ, ಸರಗೂರಿನ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಹೆಚ್ ಡಿ ಕೋಟೆಯ ಭೀಮನಕೊಲ್ಲಿ ಶ್ರೀ ಮಹದೇಶ್ವರಸ್ವಾಮಿ , ನಂಜನಗೂಡಿನ ಶ್ರೀಮಠ ಶ್ರೀ ಸುತ್ತೂರು ಕ್ಷೇತ್ರಗಳು ಸರ್ಕಾರ ಗುರುತಿಸಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ.

Key words: Government, 1275 heritage,  buildings,  tourist destinations

The post 1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳಾಗಿ ಗುರ್ತಿಸಿ ಘೋಷಿಸಿದ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಜನಗಣತಿ–2027: ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ

ಮೈಸೂರು, ಮಾರ್ಚ್,31,2026 (www.justkannada.in): ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ...

கோவை தெற்கு: `50,000 வாக்கு வித்தியாசம் டார்கெட்; இது நம்முடைய மானப் பிரச்னை' – எஸ்.பி.வேலுமணி

கோவை தெற்கு சட்டமன்றத் தொகுதி அதிமுக வேட்பாளர் அம்மன் அர்ஜுனன் அறிமுக...

Indian Rupee: ఒకప్పుడు ఈ ముస్లిం దేశాలకు రూపాయే అధికారిక కరెన్సీ.. తర్వాత ఏం అయిందంటే!

Indian Rupee: భారత దేశ చరిత్రను పరిశీలిస్తే.. దేశ వైభవం ఏంటో...