25
April, 2026

A News 365Times Venture

25
Saturday
April, 2026

A News 365Times Venture

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ- ಸುನೀಲ್ ಕುಮಾರ್ ಟೀಕೆ

Date:

ಬೆಂಗಳೂರು,ಆಗಸ್ಟ್,21,2025 (www.justkannada.in): ರಾಜ್ಯದಲ್ಲಿ ಈ ಸರ್ಕಾರದ ಆಡಳಿತದಲ್ಲಿ ಅನುದಾನ ಇಲ್ಲದೆ ಶಾಸಕರು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.  ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಟೀಕಿಸಿದರು.

ವಿಧಾನಸಭೆಯಲ್ಲಿ ನಿಯಮ 69 ರಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧ ಕೆಲಸ ಆಗಿಲ್ಲ. ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿ.ಮೀ ಹೊಸ ರಸ್ತೆ ನಿರ್ಮಾಣ ಆಗಿಲ್ಲ. ಅನುದಾನವನ್ನ ಯಾರಿಂದ ಕೊಡಿಸುತ್ತೀರಿ  ಗ್ರಾಮಾಂತರ ಭಾಗದ ರಸ್ತೆಗಳ ಕಥೆ ಹೇಳೋಕೆ ಆಗುವುದಿಲ್ಲ  ರಸ್ತೆಯಲ್ಲಿ ಗುಂಡಿ ಹುಡುಕಬೇಕೋ ಗುಂಡಿಯಲ್ಲಿ ರಸ್ತೆ ಹುಡುಕಬೇಕೋ ಗೊತ್ತಾಗುತ್ತಿಲ್ಲ.  ಗ್ಯಾರಂಟಿ ಯೋಜನೆಗಳಿಂದ ಈ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಸು ಫ್ರಮ್‌ ಸೋ ಸಿನಿಮಾ ಪ್ರಸಿದ್ದವಾಗಿದೆ. ಆದರೆ ನಾನು ಈ ಸರ್ಕಾರವನ್ನು ಬಿ ಫ್ರಮ್‌ ಸಿ ಎಂದು ಹೇಳುತ್ತೇನೆ. ಬೋಗಸ್‌ ಫ್ರಮ್‌ ಕಾಂಗ್ರೆಸ್.‌ ಕಳೆದ ಎರಡು ವರ್ಷದಲ್ಲಿ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಟೀಕೆ ಮಾಡಿದರು.

Key words: Session, grant, Discussion, BJP, MLA, Sunil kumar

The post ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ- ಸುನೀಲ್ ಕುಮಾರ್ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാനെതിരായ നാവിക ഉപരോധം ആഗോളതലത്തിലേക്ക് വ്യാപിപ്പിക്കാന്‍ അമേരിക്ക; ഹോര്‍മുസ് കടലിടുക്കില്‍ കര്‍ശന നിയന്ത്രണം

  വാഷിങ്ടണ്‍: ഇറാനെതിരെയുള്ള യുണൈറ്റഡ് സ്റ്റേറ്റ്‌സിന്റെ നാവിക ഉപരോധം ആഗോളതലത്തിലേക്ക് വ്യാപിപ്പിക്കുകയാണെന്ന്...

Off The Record: కాళేశ్వరం కేసు దర్యాప్తు చుట్టూ పొలిటికల్ కలర్..

Off The Record: కాళేశ్వరం కేసులో సీబీఐ దర్యాప్తుపై రాజకీయ పార్టీలు...

ಒಳಮೀಸಲಾತಿ ಹಂಚಿಕೆಗೆ ಸರ್ವಾನುಮತದಿಂದ ಒಪ್ಪಿಗೆ: 56,432 ಹುದ್ದೆಗಳ ಭರ್ತಿಗೆ ಇದೇ ಅನುಪಾತ ಅನ್ವಯ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,24,2026 (www.justkannada.in):  ಒಳಮೀಸಲಾತಿ ಹಂಚಿಕೆಗೆ ಸಂಬಂಧ ಇಂದು ಅಂತಿಮ ನಿರ್ಧಾರ...