27
April, 2026

A News 365Times Venture

27
Monday
April, 2026

A News 365Times Venture

ಹಾಡಹಗಲೇ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ದರೋಡೆಕೋರ ಪರಾರಿ

Date:

ಬೆಂಗಳೂರು, ಆಗಸ್ಟ್​ 13,2025 (www.justkannada.in): ಹಾಡಹಗಲೇ ದರೋಡೆಕೋರನೋರ್ವ  ಪಿಜಿಗೆ ನುಗ್ಗಿ ಮಹಿಳಾ ಅಧಿಕಾರಿಗೆ ಚಾಕು ತೋರಿಸಿ ಹೆದರಿಸಿ ಲೈಂಗಿಕ ದೌರ್ಜನ್ಯವೆಸಗಿ ನಂತರ ಮೊಬೈಲ್​ ಕಿತ್ತುಕೊಂಡು ಪರಾರಿ  ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಗಸ್ಟ್​ 11ರಂದು ಜುಡಿಷಿಯಲ್ ಲೇಔಟ್​ನ ಲೇಡಿಸ್ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಮೇಲೆಯೇ ಈ ದೌರ್ಜನ್ಯವೆಸಗಲಾಗಿದೆ.

15 ದಿನಗಳ ಹಿಂದಷ್ಟೇ ಮಹಿಳೆ ಜುಡಿಷಿಯಲ್ ಲೇಔಟ್​ ನ ಶಿವಾಸ್ ಲೇಡಿಸ್ ಪಿಜಿಗೆ ಸೇರಿಕೊಂಡಿದ್ದರು. ಆಗಸ್ಟ್​ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಆಗಮಿಸಿದ್ದರು.

ಈ ವೇಳೆ ಏಕಾಏಕಿ ಬಂದ ದರೋಡೆಕೋರ ಚಾಕು ಸಮೇತ  ಪಿಜಿಗೆ ನುಗ್ಗಿ ಮಹಿಳೆಯಿದ್ದ ರೂಮ್​​ ಡೋರ್ ಬಡೆದಿದ್ದಾನೆ. ಪಿಜಿಯವರು ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.  ಈ ವೇಳೆ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಖದೀಮ, ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬೆಡ್​ ಮೇಲಿದ್ದ 2 ಮೊಬೈಲ್​ ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಘಟನೆ ಕುರಿತು ಯಲಹಂಕ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Key words: Female officer, sexually, assault, Robber

The post ಹಾಡಹಗಲೇ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ದರೋಡೆಕೋರ ಪರಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഉക്രൈനെതിരായ ‘വിശുദ്ധ യുദ്ധത്തില്‍’ റഷ്യയ്ക്ക് പൂര്‍ണ പിന്തുണ; നിലപാട് ആവര്‍ത്തിച്ച് ഉത്തര കൊറിയ

പ്യോങ്‌യാങ്: ഉക്രൈനെതിരായ യുദ്ധത്തില്‍ റഷ്യയ്ക്ക് പൂര്‍ണ പിന്തുണ പ്രഖ്യാപിച്ച് ഉത്തര കൊറിയന്‍...

தேர்தல் முடிந்த சூட்டோடு விநாயகர், காளி கோயிலில் சாமி தரிசனம்; சொந்த ஊரில் வைகோ

தமிழக சட்டப்பேரவைத் தேர்தல் முடிந்து விட்ட சூழலில் பதிவான அதிக வாக்கு...

CM Revanth Reddy : BRS ఒక చచ్చిపోయిన శవం.. దానికి భవిష్యత్తు లేదు

CM Revanth Reddy : ముఖ్యమంత్రి రేవంత్ రెడ్డి బీఆర్ఎస్ పార్టీపై...

ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ ಸಿಗಬೇಕು- ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ,ಏಪ್ರಿಲ್,27,2026 (www.justkannada.in): ಸಚಿವ ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ  ಸಿಗಬೇಕು...