30
April, 2026

A News 365Times Venture

30
Thursday
April, 2026

A News 365Times Venture

ಜಮೀನು ಒತ್ತುವರಿ: ಮಾಲೀಕರಿಗೆ 1.60 ಕೋಟಿ ರೂ. ಪರಿಹಾರ ಚೆಕ್ ವಿತರಣೆ

Date:

ಮೈಸೂರು,ಆಗಸ್ಟ್,2,2025 (www.justkannada.in): ನಗರಸಭೆಯಿಂದ ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವ ವೇಳೆ ಜಮೀನು ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಜಮೀನು  ಮಾಲೀಕರಿಗೆ  1,60,82,242 ರೂ.ಗಳ ಪರಿಹಾರ ಚೆಕ್ ಅನ್ನು ಮೈಸೂರು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ವಿತರಿಸಲಾಯಿತು.

ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ, ಲೋಕಾಯುಕ್ತ ಕಛೇರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಮೀನು ಮಾಲೀಕರಾದ ಕೆ. ಪುಟ್ಟಮಾದಯ್ಯ ಅವರಿಗೆ ಪರಿಹಾರವಾಗಿ 1,60,82,242 ರೂ.ಗಳ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

 ಏನಿದು ಪ್ರಕರಣ

ಕೆ. ಪುಟ್ಟಮಾದಯ್ಯ ಬಿನ್ ಲೇಟ್ ಮಾದಯ್ಯ ಅವರು ಅವರ ಅಕ್ಕತಂಗಿಯರ ಹೆಸರಿನಲ್ಲಿ ಸರ್ವೇ ನಂ:222 ರಲ್ಲಿ 3.35 ಎಕರೆ ಜಮೀನು ನಗರಸಭೆಯವರು ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವಾಗ ಕೈತಪ್ಪಿನಿಂದ ಸರ್ವೇ ಕಾರ್ಯದಲ್ಲಿ ಒತ್ತುವರಿಯಾಗಿತ್ತು.  ಇದನ್ನು ಪ್ರಶ್ನಿಸಿ ಪುಟ್ಟಮಾದಯ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಲೋಕಾಯುಕ್ತರು ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲಾಧಿಕಾರಿಗಳವರ ಆದೇಶದಂತೆ ನಂಜನಗೂಡು ನಗರಸಭೆಯ ಚುನಾಯಿತ ಆಡಳಿತ ಮಂಡಳಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಿ ನಂತರ ಜಿಲ್ಲಾಧಿಕಾರಿ ಜಿಲ್ಲಾ ಸಮಿತಿಯಲ್ಲಿ ಈ ಜಮೀನಿಗೆ ದರ ನಿಗದಿಪಡಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ದಿನಾಂಕ: 31.07.2025ರಂದು ನೀಡಿದ್ದರು. ಇದೀಗ ನಂಜನಗೂಡು ನಗರಸಭಾ ವತಿಯಿಂದ ಇದರ ಖರೀದಿ ಬಾಬು ಒಟ್ಟು ಮೌಲ್ಯ ರೂ.1,60,82,242/- ಗಳ ಚೆಕ್ ಅನ್ನು ಇಂದು ಕೆ. ಪುಟ್ಟಮಾದಯ್ಯ ಅವರಿಗೆ ವಿತರಿಸಲಾಗಿದೆ.vtu

Key words: Land encroachment, Rs. 1.60 crore, compensation cheque, distributed, Mysore

The post ಜಮೀನು ಒತ್ತುವರಿ: ಮಾಲೀಕರಿಗೆ 1.60 ಕೋಟಿ ರೂ. ಪರಿಹಾರ ಚೆಕ್ ವಿತರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കാര്യങ്ങള്‍ കൈവിടുന്നു, എണ്ണവില കുതിച്ചുയരുന്നു; ഹോര്‍മുസ് കടലിടുക്ക് തുറക്കാന്‍ അന്താരാഷ്ട്ര സഹായം തേടി അമേരിക്ക

  വാഷിങ്ടണ്‍: ഇറാനുമായുള്ള യുദ്ധം രണ്ട് മാസം പിന്നിടുന്ന സാഹചര്യത്തില്‍ ഹോര്‍മുസ്...

`பிரசவ சிகிச்சை அலட்சியம்; நெஞ்சில் அமர்ந்துகொண்டு காலால் அழுத்தம் கொடுத்தனர்'- இளைஞர் குற்றச்சாட்டு

மகாராஷ்டிரா மாநிலம், நாக்பூரில் உள்ள அரசு மருத்துவமனையில் தீப்லதா என்ற பெண்...

UGC Net: యూజీసీ నెట్ నోటిఫికేషన్ విడుదల.. ముఖ్యమైన తేదీలు ఇవే..

నేషనల్ టెస్టింగ్ ఏజెన్సీ (NTA) జూన్ 2026 సెషన్‌కు సంబంధించిన యూజీసీ...

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್

ಬೆಂಗಳೂರು,ಏಪ್ರಿಲ್,30,2026 (www.justkannada.in):  ಭಾರೀ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು...